ಬೆಳಗಾವಿ:ಮೂಡಲಗಿ: 2023-24 ಸಾಲಿನ ಬರ ಪರಿಹಾರ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರವನ್ನು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆರಂಭಿಸಲಾಗಿದೆ. 2023-24ನೇ ಸಾಲಿನ ಬರ ಪರಿಹಾರ ಸಂದಾಯದ ಬಗ್ಗೆ ಸಾರ್ವಜನಿಕ/ರೈತರ ಕುಂದುಕೊರತೆ ನಿವಾರಣೆಗಾಗಿ ಸರ್ಕಾರ ಆದೇಶದಂತೆ ತಾಲೂಕುಮಟ್ಟದಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರದ ಮೊ. 8867439539 ಹಾಗೂ ಕಂದಾಯ ಇಲಾಖೆಯ ಸಿದ್ದು ಬಿಸ್ವಾಗರ ಮೊ. 9945842864, ಸಚಿನ ಕೊಣ್ಣುರ 8660784112, ಕೃಷಿ ಇಲಾಖೆಯ ಪರಸಪ್ಪ ಹುಲಗಬಾಳ ಮೊ. 8277934160, ತೋಟಗಾರಿಕೆ ಇಲಾಖೆಯ ಶಿವಾನಂದ ಸವಸುದ್ದಿ ಮೊ. 7411342383 ಅವರು ಕಾರ್ಯ ನಿರ್ವಹಿಸುತಿದ್ದು. ಬರ ಪರಿಹಾರದ ಮತ್ತು ಕುಂದುಕೊರತೆಗಳನ್ನು ನೇರವಾಗಿ ಕಚೇರಿಗೆ ಭೇಟಿ ನೀಡಿ ಅಥವಾ ಮಾಹಿತಿ ಕೇಂದ್ರಕ್ಕೆ ಕರೆ ಮಾಡಿ ಎಂದು ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.