More

    ರಾಜಕೀಯ ಕಿರುಕುಳ ಆರೋಪ: ಡೆತ್​ನೋಟ್​ ಬರೆದಿಟ್ಟು ಕೆರೆಗೆ ಹಾರಿ ಪ್ರಾಣಬಿಟ್ಟ ದೊಡ್ಡಬಳ್ಳಾಪುರದ ಬಿಜೆಪಿ ಕಾರ್ಯಕರ್ತ!

    ದೊಡ್ಡಬಳ್ಳಾಪುರ: ಇತ್ತೀಚಿಗೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಯುವಕನೊಬ್ಬ ಡೆತ್​ನೋಟ್​ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜಕೀಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗಿದೆ.

    ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದ ವಿನೋದ್​(30) ಮೃತ ದುರ್ದೈವಿ. ನಗರಸಭೆ ಸದಸ್ಯೆ ಪತಿ ಮಂಜುನಾಥ್​ ಹಾಗೂ ಇನ್ನೂ ಮೂವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ವಿನೋದ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸೆ.16ರ ಬೆಳಗ್ಗೆ ಸ್ನೇಹಿತನ ಬೈಕ್​ನಲ್ಲಿ ತಳಗವಾರ ಗ್ರಾಮಕ್ಕೆ ಡ್ರಾಪ್​ ತೆಗೆದುಕೊಂಡಿದ್ದ ವಿನೋದ್​, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಇದೇ ವೇಳೆ ಕೆರೆ ದಡದಲ್ಲಿ ಡೆತ್​ನೋಟ್​ ಹಾಗೂ ಚಪ್ಪಲಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಶವ ಪತ್ತೆಯಾಯಿತು.

    ಅನಾಮಿಕ ಪತ್ರ: ವಿನೋದನಿಗೆ ಅಂಚೆ ಮೂಲಕ ಇತ್ತೀಚೆಗೆ ಅನಾಮಿಕ ಪತ್ರ ಬಂದಿತ್ತು. ಮಾನಸಿಕ ಒತ್ತಡಕ್ಕೆ ಸಿಲುಕಿದ್ದ, ಇಡೀ ದಿನ ಮನೆಯಲ್ಲಿ ಒಂಟಿಯಾಗಿಯೇ ಇದ್ದ, ಬಳಿಕ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.

    ಪಕ್ಷಾಂತರ ಕಾರಣವೇ?: ಈ ಹಿಂದೆ ನಗರಸಭೆ ಚುನಾವಣೆಯಲ್ಲಿ ಮಂಜುನಾಥ್​ರ​ ಪತ್ನಿ ಗೆಲುವಿನಲ್ಲಿ ವಿನೋದ್​ ಪ್ರಮುಖ ಪಾತ್ರ ವಹಿಸಿದ್ದ. ಬಳಿಕ ಇಬ್ಬರ ನಡುವೆ ಸಂಬಂಧ ಕೆಟ್ಟಿತ್ತು, ಇತ್ತೀಚೆಗೆ ವಿನೋದ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ, ಇದು ಮಂಜುನಾಥ್​ ಹಾಗೂ ಆತನ ಹಿಂಬಾಲಕರ ಕೆಂಗಣ್ಣಿಗೆ ಕಾರಣವಾಗಿತ್ತು. ಅವರು ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ದೂರಿರುವ ವಿನೋದ್​ರ ಪತ್ನಿ ಅನುಷಾ, ಇದು ಆತ್ಮಹತ್ಯೆಯಲ್ಲ. ಪೂರ್ವ ಸಂಚಿನ ಕೊಲೆ ಎಂದು ಆರೋಪಿಸಿದ್ದಾರೆ. ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಪ್ರಕರಣ ದಾಖಲಿಸಿದ್ದಾರೆ.

    ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿ… ಎನ್ನುತ್ತಲೇ ಇಂದು ನಡೆಯಬೇಕಿದ್ದ ಬಹುನಿರೀಕ್ಷಿತ ಕಾರ್ಯವನ್ನು ಮುಂದೂಡಿದ ಎಚ್​ಡಿಕೆ!

    ಸ್ಕೂಲ್​ ಬಸ್​ಗೆ 3 ವರ್ಷದ ಬಾಲಕಿ ಬಲಿ! ತಾತನ ಮನೆ ಮುಂದೆ ಆಟವಾಡುತ್ತಿರುವಾಗಲೇ ದುರಂತ

    ಇಂತಹ ಹೆಂಗಸು ನನಗೆ ಬೇಡ, ಮಗನೇ ನಿನ್ನ ಅಮ್ಮ ಸರಿಯಿಲ್ಲ, ಆಕೆ ಜತೆ ಇರಬೇಡ… ಎಂದು ಮನದ ನೋವು ಬಿಚ್ಚಿಟ್ಟು ದುರಂತ ಅಂತ್ಯ ಕಂಡ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts