More

    ರೋಗಿಯನ್ನು ನೋಡಲು ಬಂದವರನ್ನು ಥಳಿಸಿದ ಡಾಕ್ಟರ್​! ಬೆಚ್ಚಿ ಬೀಳಿಸುತ್ತೆ ಈ ಆಸ್ಪತ್ರೆಯಲ್ಲಿ ನಡೆದ ಘಟನೆ

    ನೆಲಮಂಗಲ: ಸಂಬಂಧಪಟ್ಟವರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ಅವರನ್ನು ನೋಡಲು ಬಂದ ಯುವಕರ ಮೇಲೆ ಡಾಕ್ಟರ್​ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕೇರ್​ ಏಷ್ಯಾ ಆಸ್ಪತ್ರೆಯಲ್ಲಿ ನಡೆದಿದೆ.

    ಡಾಕ್ಟರ್​ ಶ್ರೀನಿವಾಸ್​ ಆರೋಪಿತ ವೈದ್ಯ. ಈತ ತ್ಯಾಮಗೊಂಡ್ಲು ಲೋಕೇಶ್ ಹಾಗೂ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಹಿನ್ನೆಲೆ ಅವರಿಬ್ಬರನ್ನು ರೂಮಿನೊಳಗೆ ಕೂಡಿ ಹಾಕಿ ಮೊಬೈಲ್​ನ್ನು ಕಿತ್ತುಕೊಂಡು ವಿಡಿಯೋ ಡಿಲೀಟ್​ ಮಾಡಿರುವುದಾಗಿಯೂ ಆರೋಪಿಸಲಾಗಿದೆ.

    ಸ್ಥಳೀಯರು ತಮ್ಮ ಮೊಬೈಲ್​ಗಳಲ್ಲಿ ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಅಂದ ಹಾಗೆ ಈ ಆಸ್ಪತ್ರೆಯನ್ನು ತಾಲೂಕು ಆಡಳಿತದ ಅನುಮತಿ ಇಲ್ಲದೆಯೇ ನಿರ್ಮಿಸಲಾಗಿದೆ ಎನ್ನುವುದು ತಿಳಿದುಬಂದಿದೆ. ಈ ರೀತಿಯ ಕೃತ್ಯ ನಡೆಸಿರುವ ಇವರು ವೈದ್ಯರೋ ಅಥವಾ ರೌಡಿಗಳೋ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಜಿಲ್ಲೆಯಲ್ಲಿ ಮದ್ಯ ಮಾರಾಟವಿಲ್ಲವೆಂದು ಬೇರೆ ಜಿಲ್ಲೆಯಿಂದ ತಂದು ಮಾರಲು ಪ್ರಯತ್ನ; ಮದ್ಯ ವಶ ಪಡಿಸಿಕೊಂಡ ಅಧಿಕಾರಿಗಳು

    ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts