ಮೇರಠ್: ಆತ್ಮಹತ್ಯೆ ಮಾಡಿಕೊಂಡ ಬಾಲಕನ ಮೃತದೇಹದ ಪೋಸ್ಟ್ ಮಾರ್ಟಮ್ಗೆ ಈ ಸರ್ಕಾರಿ ವೈದ್ಯ ಬೇಡಿಕೆಯಿಟ್ಟ ಲಂಚದ ಮೊತ್ತ ಕೇಳಿದರೆ ಅಬ್ಬಬ್ಬಾ ಇಷ್ಟು ಭ್ರಷ್ಟತನವಾ ಎನ್ನಿಸದೆ ಇರದು..!
ಉತ್ತರ ಪ್ರದೇಶದ ಬಾಗ್ಪಾತ್ ಜಿಲ್ಲೆಯ ನಿರ್ಪುರಾ ಗ್ರಾಮದ 16ವರ್ಷದ ಬಾಲಕನೋರ್ವ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದ. ಅವನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿನ ವೈದ್ಯ ಪೋಸ್ಟ್ಮಾರ್ಟಮ್ ಮಾಡಬೇಕೆಂದರೆ 8700 ರೂ.ಕೊಡಬೇಕು ಎಂದು ಹೇಳಿದ. ಹಾಗೇ ಪೋಸ್ಟ್ ಮಾರ್ಟಮ್ ಮುಗಿದ ಬಳಿಕ ಆ ದೇಹಕ್ಕೆ ಸರಿಯಾಗಿ ಹೊಲಿಗೆ ಹಾಕಿ, ಶವವನ್ನು ಸುತ್ತಿ, ಕುಟುಂಬದವರಿಗೆ ಹಸ್ತಾಂತರ ಮಾಡುವುದು ವೈದ್ಯಕೀಯ ಸಿಬ್ಬಂದಿಯ ಕೆಲಸ. ಆದರೆ ಇಲ್ಲಿನ ಸಿಬ್ಬಂದಿ ಅದಕ್ಕಾಗಿ ಬಾಲಕನ ತಂದೆಯ ಬಳಿ ಮತ್ತೆ 800 ರೂ.ಕೇಳಿದ್ದಾರೆ.
ಮೃತ ಬಾಲಕನ ತಂದೆ ಸೋಮ್ ದತ್ತಾ ಶರ್ಮಾ ಸದ್ಯ ನಿರುದ್ಯೋಗಿ. ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡವರು. ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು. ವೈದ್ಯ ಅಷ್ಟೊಂದು ದೊಡ್ಡ ಮೊತ್ತದ ಲಂಚ ಕೇಳಿದಾಗ ನೆರೆಹೊರೆಯವರೆಲ್ಲ ಅವರ ಸಹಾಯಕ್ಕೆ ನಿಂತರು. ಸುಮಾರು 5,500 ರೂ.ಸಂಗ್ರಹವಾಗಿತ್ತು. ಅದನ್ನೇ ವೈದ್ಯರಿಗೆ ಕೊಟ್ಟು ಹೇಗೋ ಪೋಸ್ಟ್ ಮಾರ್ಟಮ್ ಮುಗಿಯಿತು. ಇದನ್ನೂ ಓದಿ: 5 ಕೇಂದ್ರಗಳಲ್ಲಿ ಸಿಇಟಿ, ಕರೊನಾ ಇದ್ದವರಿಗೆ ಪ್ರತ್ಯೇಕ ಕೊಠಡಿ
ಆದರೆ ನಂತರ ಶವ ಹಸ್ತಾಂತರ ಮಾಡಲು ಸಿಬ್ಬಂದಿ ಹಣ ಕೇಳಿದಾಗ ಪಾಲಕರು ತಮ್ಮ ಬಳಿ ದುಡ್ಡು ಇಲ್ಲ ಎಂದು ಹೇಳಿದರು. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ಮೃತದೇಹಕ್ಕೆ ಅರ್ಧಂಬರ್ಧ ಹೊಲಿಗೆ ಹಾಕಿ ವಾಪಸ್ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಿದ ಆ ಗ್ರಾಮ ಮುಖ್ಯಸ್ಥನ ಪುತ್ರ ನಿಶ್ಚಯ್ ರಾಣಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ವಿಟರ್ನಲ್ಲಿ ಟ್ಯಾಗ್ ಮಾಡಿ ದೂರು ನಿಡಿದ್ದಾರೆ. ದಯವಿಟ್ಟು ಲಂಚಕೋರ ವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಮಂತ್ರಿ ಕಚೇರಿಯನ್ನೂ ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್ ಬಾಗ್ಪತ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ರಾಜ್ ಕಿಶೋರ್ ಟಂಡನ್ ಅವರ ಗಮನಕ್ಕೆ ಬಂದಿದ್ದು, ಅವರು ಆರೋಪಿ ವೈದ್ಯರು ಮತ್ತು ಅವರ ಇಬ್ಬರು ಸಹಾಯಕರಿಂದ ವರದಿ ಕೇಳಿದ್ದಾರೆ(ಏಜೆನ್ಸೀಸ್)
ರಾಮಮಂದಿರ ಸ್ಥಳದ 2000 ಅಡಿ ಆಳದಲ್ಲಿ ಟೈಂ ಕ್ಯಾಪ್ಸೂಲ್ ಇಡುವುದು ಸುಳ್ಳು…ಯಾರೂ ನಂಬಬೇಡಿ