- ಚಂದ್ರಯಾನ-3 ನಿರ್ದೇಶಕ ಮುತ್ತುವೇಲು, ಚಿತ್ರನಟ ದೊಡ್ಡಣ್ಣ ಆಗಮನ
- ಗಣ್ಯಾತಿಗಣ್ಯರ ಸಮಾಗಮ
ಕೊಪ್ಪಳ: ಈ ಬಾರಿ ಜ.27ರಂದು ನಡೆವ ಗವಿಸಿದ್ಧೇಶ್ವರ ಮಹಾ ರಥೋತ್ಸವಕ್ಕೆ ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಯುನೆಸ್ಕೋ ಭಾರತದ ರಾಯಭಾರಿ ಚಿರಂಜಿವಿ ಸಿಂಘ್, ಇಸ್ರೋ ಸಂಸ್ಥೆಯ ಚಂದ್ರಯಾನ-3ರ ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲ್ ಹಾಗೂ ಅದಮ್ಯ ಚೈತನ್ಯ ಪೌಂಢೇಶನ್ ಸಹ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಇರಲಿದ್ದಾರೆ.
ಜ.28ರ ಭಕ್ತ ಹಿತ ಚಿಂತನಾ ಸಭೆಯಲ್ಲಿ ಸಿದ್ಧಾಪುರದ ಶಿರಳಗಿ ರಾಜಾರಾಮ ಆಶ್ರಮದ ಪರಮಪೂಜ್ಯ ಬ್ರಹ್ಮಾನಂದ ಭಾರತಿ ಮಹಾಸ್ವಾಮಿ, ಮಿಲ್ಲೆಟ್ ಮ್ಯಾನ್ ಇಂಡಿಯಾ ಖ್ಯಾತಿಯ ಮೈಸೂರಿನ ಪದ್ಮಶ್ರೀ ಪುರಸತ ಡಾ.ಖಾದರ್ ವಲಿ ದೂದೇಕುಲ, ಅಹಮದ್ ನಗರದ ಹೀವರೆ ಬಜಾರ್ ಗ್ರಾಪಂ ಸರಪಂಚ್, ಪದ್ಮಶ್ರೀ ಪುರಸತ ಪೋಪಟ್ರಾವ್ ಪವಾರ್ ಭಾಗವಹಿಸಲಿದ್ದಾರೆ.
ಇನ್ನು ಜ.30ರ ಸಮಾರೋಪ ಸಮಾರಮಭದಲ್ಲಿ ಮೈಸೂರಿನ ಗ್ರಿನ್ ಆಸ್ಕರ್ ಪ್ರಶಸ್ತಿ ಪುರಸತ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಪಾಲ್ಗೊಳ್ಳಲಿದ್ದಾರೆ.