More

    ಸುತ್ತೂರು ಶ್ರೀಗಳಿಂದ ಗವಿಸಿದ್ಧೇಶ್ವರ ರಥೋತ್ಸವಕ್ಕೆ ಚಾಲನೆ

    • ಚಂದ್ರಯಾನ-3 ನಿರ್ದೇಶಕ ಮುತ್ತುವೇಲು, ಚಿತ್ರನಟ ದೊಡ್ಡಣ್ಣ ಆಗಮನ
    • ಗಣ್ಯಾತಿಗಣ್ಯರ ಸಮಾಗಮ

    ಕೊಪ್ಪಳ: ಈ ಬಾರಿ ಜ.27ರಂದು ನಡೆವ ಗವಿಸಿದ್ಧೇಶ್ವರ ಮಹಾ ರಥೋತ್ಸವಕ್ಕೆ ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

    ಉದ್ಘಾಟನಾ ಸಮಾರಂಭದಲ್ಲಿ ಯುನೆಸ್ಕೋ ಭಾರತದ ರಾಯಭಾರಿ ಚಿರಂಜಿವಿ ಸಿಂಘ್​, ಇಸ್ರೋ ಸಂಸ್ಥೆಯ ಚಂದ್ರಯಾನ-3ರ ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲ್​ ಹಾಗೂ ಅದಮ್ಯ ಚೈತನ್ಯ ಪೌಂಢೇಶನ್​ ಸಹ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್​ ಇರಲಿದ್ದಾರೆ.

    ಜ.28ರ ಭಕ್ತ ಹಿತ ಚಿಂತನಾ ಸಭೆಯಲ್ಲಿ ಸಿದ್ಧಾಪುರದ ಶಿರಳಗಿ ರಾಜಾರಾಮ ಆಶ್ರಮದ ಪರಮಪೂಜ್ಯ ಬ್ರಹ್ಮಾನಂದ ಭಾರತಿ ಮಹಾಸ್ವಾಮಿ, ಮಿಲ್ಲೆಟ್​ ಮ್ಯಾನ್​ ಇಂಡಿಯಾ ಖ್ಯಾತಿಯ ಮೈಸೂರಿನ ಪದ್ಮಶ್ರೀ ಪುರಸತ ಡಾ.ಖಾದರ್​ ವಲಿ ದೂದೇಕುಲ, ಅಹಮದ್​ ನಗರದ ಹೀವರೆ ಬಜಾರ್​ ಗ್ರಾಪಂ ಸರಪಂಚ್​, ಪದ್ಮಶ್ರೀ ಪುರಸತ ಪೋಪಟ್​ರಾವ್​ ಪವಾರ್​ ಭಾಗವಹಿಸಲಿದ್ದಾರೆ.

    ಇನ್ನು ಜ.30ರ ಸಮಾರೋಪ ಸಮಾರಮಭದಲ್ಲಿ ಮೈಸೂರಿನ ಗ್ರಿನ್​ ಆಸ್ಕರ್​ ಪ್ರಶಸ್ತಿ ಪುರಸತ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts