More

    ಖ್ಯಾತ ನಿರ್ದೇಶಕ ಎಸ್​.ನಾರಾಯಣ್​ಗೆ ‘ಸೈಟ್’ ವಂಚನೆ; ಸಿಸಿಬಿಯಿಂದ ತನಿಖೆ ಪ್ರಾರಂಭ

    ಬೆಂಗಳೂರು: ಸಿನಿಮಾ ಮಾಡ್ತೀವಿ ಎಂದು ಬಂದ ಐದು ಜನರಿಂದ ಖ್ಯಾತ ನಿರ್ದೇಶಕ, ನಟ ಎಸ್​.ನಾರಾಯಣ್​ ವಂಚನೆಗೆ ಒಳಗಾಗಿದ್ದು, ಸಿಸಿಬಿ ಕಚೇರಿಗೆ ದೂರು ನೀಡಿದ್ದಾರೆ.

    ಸಿನಿಮಾ ಮಾಡೋಣ ಎನ್ನುತ್ತ ಐವರು ನಿರ್ದೇಶಕ ಎಸ್​.ನಾರಾಯಣ್​ ಅವರ ಬಳಿ ಬಂದಿದ್ದರು. ನಾಲ್ಕು ದಿನ ಶೂಟಿಂಗ್​ ಬಳಿಕ ಚಿತ್ರೀಕರಣ ನಿಂತು ಹೋಗಿತ್ತು. ಮತ್ತೆ ಈ ಐವರು ಬಂದು, ಒಂದು ಸೈಟ್ ಇದೆ. ಅದನ್ನು ಮಾರಿ ಸಿನಿಮಾ ಮುಂದುವರಿಸೋಣ ಎಂದಿದ್ದರು. ಅದನ್ನು ನಂಬಿದ ಎಸ್​.ನಾರಾಯಣ ಶೂಟಿಂಗ್​ ಶುರುಮಾಡಲು ಮುಂದಾಗಿದ್ದರು.

    ಆದರೆ ಈ ಆರೋಪಿಗಳು ವಿವಿಧ ತಾಂತ್ರಿಕ ಸಮಸ್ಯೆಗಳನ್ನು ಹೇಳಿ, ತಮ್ಮ ಬಳಿ ಇದೆ ಎಂದು ಹೇಳಿದ ಸೈಟ್​​ನ್ನು ನಾರಾಯಣ್​ ಅವರಿಗೆ ಮಾರಿದ್ದರು. ಅದೇ ಸೈಟ್ ಖರೀದಿಸಿದ್ದ ಅವರು ಲೋನ್​ ಪಡೆದಿದ್ದರು. ಆದರೆ ಇಎಂಐ ಕಟ್ಟುವ ವೇಳೆ, ನಿವೇಶನದ ದಾಖಲೆಗಳೆಲ್ಲ ನಕಲಿ ಎಂಬುದು ಗೊತ್ತಾಗಿದೆ.  ಎಸ್​.ನಾರಾಯಣ್​ ಅವರು ಆರೋಪಿಗಳಿಂದ 1.6 ಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ. ಸಿಸಿಬಿಯಿಂದ ತನಿಖೆ ನಡೆಯುತ್ತಿದೆ.

    ಎಐಸಿಸಿಗೆ ಹೊಸ ಅಧ್ಯಕ್ಷ? ಶೀಘ್ರದಲ್ಲೇ ಸಭೆ ನಡೆಸಲು ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts