ಬೆಂಗಳೂರು: ಸಿನಿಮಾ ಮಾಡ್ತೀವಿ ಎಂದು ಬಂದ ಐದು ಜನರಿಂದ ಖ್ಯಾತ ನಿರ್ದೇಶಕ, ನಟ ಎಸ್.ನಾರಾಯಣ್ ವಂಚನೆಗೆ ಒಳಗಾಗಿದ್ದು, ಸಿಸಿಬಿ ಕಚೇರಿಗೆ ದೂರು ನೀಡಿದ್ದಾರೆ.
ಸಿನಿಮಾ ಮಾಡೋಣ ಎನ್ನುತ್ತ ಐವರು ನಿರ್ದೇಶಕ ಎಸ್.ನಾರಾಯಣ್ ಅವರ ಬಳಿ ಬಂದಿದ್ದರು. ನಾಲ್ಕು ದಿನ ಶೂಟಿಂಗ್ ಬಳಿಕ ಚಿತ್ರೀಕರಣ ನಿಂತು ಹೋಗಿತ್ತು. ಮತ್ತೆ ಈ ಐವರು ಬಂದು, ಒಂದು ಸೈಟ್ ಇದೆ. ಅದನ್ನು ಮಾರಿ ಸಿನಿಮಾ ಮುಂದುವರಿಸೋಣ ಎಂದಿದ್ದರು. ಅದನ್ನು ನಂಬಿದ ಎಸ್.ನಾರಾಯಣ ಶೂಟಿಂಗ್ ಶುರುಮಾಡಲು ಮುಂದಾಗಿದ್ದರು.
ಆದರೆ ಈ ಆರೋಪಿಗಳು ವಿವಿಧ ತಾಂತ್ರಿಕ ಸಮಸ್ಯೆಗಳನ್ನು ಹೇಳಿ, ತಮ್ಮ ಬಳಿ ಇದೆ ಎಂದು ಹೇಳಿದ ಸೈಟ್ನ್ನು ನಾರಾಯಣ್ ಅವರಿಗೆ ಮಾರಿದ್ದರು. ಅದೇ ಸೈಟ್ ಖರೀದಿಸಿದ್ದ ಅವರು ಲೋನ್ ಪಡೆದಿದ್ದರು. ಆದರೆ ಇಎಂಐ ಕಟ್ಟುವ ವೇಳೆ, ನಿವೇಶನದ ದಾಖಲೆಗಳೆಲ್ಲ ನಕಲಿ ಎಂಬುದು ಗೊತ್ತಾಗಿದೆ. ಎಸ್.ನಾರಾಯಣ್ ಅವರು ಆರೋಪಿಗಳಿಂದ 1.6 ಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ. ಸಿಸಿಬಿಯಿಂದ ತನಿಖೆ ನಡೆಯುತ್ತಿದೆ.