More

    ಡಾ. ಬಿ.ಕೆ.ಎಸ್. ವರ್ಧನ್ ವರ್ಗಾವಣೆ

    ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತರ ಕಚೇರಿ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಅವರನ್ನು ಕಲಬುರಗಿಗೆ ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇಲಾಖೆಯ ಕಲಬುರಗಿ ಅಪರ ಆಯುಕ್ತರ ಕಚೇರಿಯಲ್ಲಿ ಖಾಲಿ ಇದ್ದ ಸಮಾನ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

    ಡಾ. ವರ್ಧನ್ ಅ. 2ರಂದು ತಮ್ಮ ಕಚೇರಿಯಲ್ಲಿ ಇಡೀ ದಿನ ಮೌನ, ಉಪವಾಸ ಸತ್ಯಾಗ್ರಹದೊಂದಿಗೆ ಗಾಂಧಿ ಜಯಂತಿ ಆಚರಿಸಿದ್ದರು. ಸ್ವಪ್ರಾಯಶ್ಚಿತ್ತಕ್ಕಾಗಿ ಧ್ಯಾನ, ಮೌನ, ಉಪವಾಸ ಸತ್ಯಾಗ್ರಹ ಆಚರಿಸಿದ್ದರು. ತಮ್ಮ ಕಚೇರಿ ಕಸವನ್ನು ಸ್ವತಃ ಗುಡಿಸಿಕೊಂಡಿದ್ದರು. ವಿಶಿಷ್ಟ ಆಚರಣೆ, ಅಪರ ಆಯುಕ್ತರ ಆಡಳಿತ ವೈಖರಿ ಸರಿಯಾಗಿಲ್ಲ ಎಂದು ಫೇಸ್​ಬುಕ್​ನಲ್ಲಿ ಪ್ರಕಟಿಸಿ ಅಧಿಕಾರಿ ವರ್ಗದ ವಿರುದ್ಧ ಹರಿಹಾಯ್ದಿದ್ದರು. ಧಾರವಾಡ ಆಯುಕ್ತಾಲಯಕ್ಕೆ ಐಎಎಸ್ ಗ್ರೇಡ್- 2 ಅಥವಾ ಸಮಾನಾಂತರ ವೇತನ ಶ್ರೇಣಿ ಅಧಿಕಾರಿಯನ್ನು ಅಪರ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಬೇಕು ಎಂದು ಡಾ. ವರ್ಧನ್ ಆಗ್ರಹಿಸಿ ಇಲಾಖೆ ಮೇಲಧಿಕಾರಿಗಳು, ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು. ನ. 7ರಂದು ಬರೆದ ಪತ್ರಕ್ಕೆ ಇಲಾಖೆಯ 10 ಹಿರಿಯ ಅಧಿಕಾರಿಗಳು ಸಹಿ ಹಾಕಿದ್ದರು. ಈ ಮಧ್ಯೆ ಡಾ. ವರ್ಧನ್ ಅವರನ್ನೇ ಸರ್ಕಾರ ಕಲಬುರಗಿಗೆ ವರ್ಗಾವಣೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts