More

    ರಸ್ತೆ ಮೇಲೆ ಉಗುಳಿದವರ ಬಂಧನ

    ಅಕ್ಕಿಆಲೂರ: ಪಟ್ಟಣದಲ್ಲಿ ಬೈಕ್ ಮೇಲೆ ಅನುಮಾನಾಸ್ಪದವಾಗಿ ಸಂಚರಿಸಿ, ರಸ್ತೆಗಳಲ್ಲಿ ಉಗುಳುತ್ತ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ವಿುಸುತ್ತಿದ್ದ ನಾಲ್ವರು ದುಷ್ಕರ್ವಿುಗಳನ್ನು ಬಂಧಿಸಲಾಗಿದೆ.

    ಸಮೀಮುಲ್ಲಾ ಅಬ್ದುಲ್​ವಾಹಿದ್ ಲಾಲನವರ, ಮಹ್ಮದ್​ಇಕ್ಬಾಲ್ ಅಜೀಜ ತಿಳವಳ್ಳಿ, ನಿಸೀರಾಅಹ್ಮದ್ ಕಬೀರ ಹಿತ್ತಲಮನಿ, ಶಾರುಖ್​ಖಾನ್ ಅನ್ವರ್​ಖಾನ್ ಪಠಾಣ ಬಂಧಿತರು. ಏ. 22ರಂದು ಸಮೀಮುಲ್ಲಾ ಲಾಲನವರ ಮತ್ತು ಇಬ್ಬರು ಬೈಕ್ ಸವಾರರು ರಾತ್ರಿವೇಳೆ ಪೇಟೆಓಣಿಯಲ್ಲಿ ಮಾಸ್ಕ್ ಹಾಕಿಕೊಳ್ಳದೆ ಪದೇಪದೆ ಸಂಚರಿಸಿದ್ದಾರೆ. ರಸ್ತೆಯಲ್ಲಿ ಉಗುಳುವುದು ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಸ್ಥಳೀಯರು, ‘ಇಂತಹ ಕೃತ್ಯ ಏಕೆ ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ಜನರು ಸೇರುತ್ತಿದ್ದಂತೆ ಹಿಂದು ಸಮಾಜಕ್ಕೆ ಅವಹೇಳನಕಾರಿಯಾಗಿ ನಿಂದಿಸಿ ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ 15-20 ಯುವಕರ ತಂಡ ಬಂದು ಮತ್ತೆ ಪೇಟೆಓಣಿಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೂ 15 ಜನರ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ನಡೆಯುತ್ತಿದಂತೆ ಕಾರ್ಯಪ್ರವೃತ್ತರಾದ ಪೇಟೆಓಣಿ ನಿವಾಸಿಗಳು ಗ್ರಾಮದೇವಿ ಪಾದಗಟ್ಟೆ ಹತ್ತಿರದ ಉರ್ದು ಶಾಲೆಯಿಂದ ಕೆನರಾ ಬ್ಯಾಂಕ್ ವರೆಗೂ ಯಾರೂ ಪ್ರವೇಶಿಸದಂತೆ ಮುಳ್ಳಿನಕಂಟಿಯಿಂದ ರಸ್ತೆ ಬಂದ್ ಮಾಡಿದ್ದಾರೆ.

    ಹಿಂದು ಸಮಾಜದಿಂದ ಮನವಿ: ಕೆಲ ದುಷ್ಕರ್ವಿುಗಳು ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹದಗೆಡಿಸುತ್ತಿದ್ದಾರೆ. ಇಂಥವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪಟ್ಟಣದ ಹಿಂದು ಸಮಾಜದ ಮುಖಂಡರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐ ಪ್ರವೀಣ ನೀಲ್ಲಮ್ಮನವರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts