ನವದೆಹಲಿ: ಯುವ ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಸಿಲುಕಿ ಪೊಲೀಸ್ ಕಸ್ಟಡಿಯಲ್ಲಿರುವ ಅವಳಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರ ಸಶಸ್ತ್ರ ಪರವಾನಗಿಯನ್ನು ದೆಹಲಿ ಪೊಲೀಸರು ಅಮಾನತುಗೊಳಿಸಿದ್ದಾರೆ. ಮೇ 5 ರಂದು ಉತ್ತರ ದೆಹಲಿಯ ಛತ್ರಾಶಾಲ್ ಸ್ಟೇಡಿಯಂ ಆವರಣದಲ್ಲಿ 23 ವರ್ಷದ ರೆಸ್ಲರ್ ಸಾಗರ್ ರಾಣಾ ಎಂಬುವರ ಕೊಲೆನಡೆದಿತ್ತು. ಈ ಕೊಲೆಗೆ ಸಂಬಂಧಪಟ್ಟ ಸುಶೀಲ್ ಕುಮಾರ್ ಅವರ ಸಹಚರ ಅಜಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸುಶೀಲ್ ಕುಮಾರ್ಗೆ ನೀಡಲಾಗಿದ್ದ, ಸಶಸ್ತ್ರ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, ಲೈಸೆನ್ಸ್ ರದ್ದು ಮಾಡುವ ಕುರಿತು ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಓಪಿ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್ ಖಚಿತಗೊಂಡ ಬೆನ್ನಲ್ಲೇ ಟ್ರೋಲ್ ಆದ ಸುರೇಶ್ ರೈನಾ.
ಇದಕ್ಕೂ ಮೊದಲು ಸುಶೀಲ್ ಕುಮಾರ್ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ನಾರ್ಥರ್ನ್ ರೈಲ್ವೇಸ್ ಇಲಾಖೆ ಸೇವೆಯಿಂದ ಅಮಾನತುಗೊಳಿಸಿತ್ತು. ಶನಿವಾರವಷ್ಟೇ ಸುಶೀಲ್ ಕುಮಾರ್ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ನ್ಯಾಯಾಲಯ ಮತ್ತೆ ನಾಲ್ಕು ದಿನಗಳ ಕಾಲ ವಿಸ್ತರಿಸಿದೆ. ಕಳೆದ ಭಾನುವಾರದಿಂದ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ ಸುಶೀಲ್ ಕುಮಾರ್ ಅವರನ್ನು ಒಪ್ಪಿಸಲಾಗಿತ್ತು.
ಇದನ್ನೂ ಓದಿ:16 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ಗೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮಾತೇ ಸ್ಫೂರ್ತಿ.
ಮೇ 4ರಂದು ಛತ್ರಶಾಲಾ ಸ್ಟೇಡಿಯಂ ಹೊರಗೆ 23 ವರ್ಷದ ಪೈಲ್ವಾನ್ ಸಾಗರ್ ಕೊಲೆಯಾಗಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿ ಸುಶೀಲ್ ತಲೆಮರೆಸಿಕೊಂಡಿದ್ದರು. ಸುಶೀಲ್ 2008 ಮತ್ತು 2012ರ ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿದ್ದರು.
ಹೊಸ ಬೈಕ್ನಲ್ಲಿ ಪೋಸ್ ನೀಡಲು ಹೋಗಿ ನೆಟ್ಟಿಗರಿಂದ ಕಾಲೆಳೆಸಿಕೊಂಡ ವೇಗದ ಬೌಲರ್ ನವದೀಪ್ ಸೈನಿ..