ನವದೆಹಲಿ: ಹಿಂದುತ್ವವನ್ನು ಉಗ್ರ ಸಂಘಟನೆಗಳ ಜಿಹಾದಿ ಇಸ್ಲಾಮಿಗೆ ಹೋಲಿಸಿ ಬರೆದಿದ್ದಾರೆನ್ನಲಾದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಮೇಲೆ ನಿಷೇಧ ಹೇರಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಖುರ್ಷಿದ್ರ ‘ಸನ್ರೈಸ್ ಓವರ್ ಅಯೋಧ್ಯ: ನೇಷನ್ಹುಡ್ ಇನ್ ಅವರ್ ಟೈಮ್ಸ್’ ಪುಸ್ತಕದ ಕೆಲವು ಅಂಶಗಳು ಒಂದು ವರ್ಗದ ಜನರ ಭಾವನೆಗಳಿಗೆ ಧಕ್ಕೆ ತರುವಂಥವು ಎಂದು ವಾದಿಸಿದ್ದ ರಿಟ್ ಅರ್ಜಿಯೊಂದನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.
ಹಿಂದುತ್ವದ ‘ರೋಬಸ್ಟ್ ವರ್ಷನ್’ ಐಸಿಸ್ ಮತ್ತು ಬೊಕೊ ಹರಾಮ್ನಂಥ ಭಯೋತ್ಪಾದಕ ಗುಂಪುಗಳ ಜಿಹಾದಿಸ್ಟ್ ಇಸ್ಲಾಂನಂತೆ ಎಂಬ ಹೇಳಿಕೆಯ ಮೂಲಕ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ರ ಪುಸ್ತಕ ವಿವಾದ ಹುಟ್ಟುಹಾಕಿತ್ತು. ವಾಕ್ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅನಿರ್ಬಂಧಿತವಲ್ಲ. ಯಾರಿಗೂ ಇನ್ನೊಬ್ಬರ ಭಾವನೆಗಳನ್ನು ನೋಯಿಸುವ ಹಕ್ಕಿರುವುದಿಲ್ಲ. ಆದ್ದರಿಂದ ಪುಸ್ತಕವನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಈ ಕನ್ನಡ ಸಿನಿಮಾವನ್ನು ನೀವು ನೋಡಲೆಬೇಕೆಂದರು ಸುಧಾಮೂರ್ತಿ, ಯಾವುದು ಆ ಸಿನಿಮಾ?
ಅರ್ಜಿದಾರರು ಪುಸ್ತಕದ ಕೆಲವು ಅಂಶಗಳನ್ನು ಮಾತ್ರ ಪ್ರಸ್ತಾಪಿಸಿದ್ದು, ಇಡೀ ಪುಸ್ತಕವನ್ನು ನ್ಯಾಯಾಲಯದ ಮುಂದಿರಿಸಲಾಗಿಲ್ಲ. ಮೇಲಾಗಿ ಜನರಿಗೆ ಈ ಪುಸ್ತಕ ಚೆನ್ನಾಗಿಲ್ಲ; ನೀವು ಕೊಳ್ಳಬೇಡಿ, ಓದಬೇಡಿ ಎನ್ನುವ ಅವಕಾಶ ನಿಮಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು ಎಂದು ವರದಿ ಹೇಳಿದೆ. (ಏಜೆನ್ಸೀಸ್)
ಈ ರಾಜ್ಯಕ್ಕಿದು 5ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ! ಜೇವರ್ ಏರ್ಪೋರ್ಟ್ಗೆ ಶಿಲಾನ್ಯಾಸ