ನವದೆಹಲಿ : ಕರೊನಾ ಎರಡನೇ ಅಲೆಯು ತಾರಕಕ್ಕೇರಿದ ಸಮಯದಲ್ಲಿ ದೆಹಲಿಯಲ್ಲಿ ಮೆಡಿಕಲ್ ಆಕ್ಸಿಜನ್ಗೆ ಹಾಹಾಕಾರ ಎದ್ದಿತ್ತು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಇತರ ರಾಜ್ಯಗಳಿಂದ ಕೂಡ ಆಕ್ಸಿಜನ್ ಪೂರೈಕೆ ಪಡೆದರು. ಆದರೆ, ದೆಹಲಿ ಸರ್ಕಾರ ಅಗತ್ಯವಿದ್ದ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೇಡಿಕೆಯನ್ನು ತೋರಿಸಿತ್ತು ಎಂದು ಇದೀಗ ಸುಪ್ರೀಂ ಕೋರ್ಟ್ ತಂಡವೊಂದು ವರದಿ ನೀಡಿದೆ. ದೆಹಲಿ ಆಸ್ಪತ್ರೆಗಳು ಒದಗಿಸಿದ ಮಾಹಿತಿಗಳಲ್ಲಿ ಲೋಪದೋಷಗಳಿವೆ ಎಂದು ಬೆಟ್ಟುಮಾಡಿದೆ.
ದೆಹಲಿ ಸರ್ಕಾರವು ಆಕ್ಸಿಜನ್ ಅಗತ್ಯವನ್ನು ನಾಲ್ಕು ಪಟ್ಟಷ್ಟು ಉತ್ಪ್ರೇಕ್ಷೆ ಮಾಡಿ ಹೇಳಿದೆ. “ಬೆಡ್ ಫಾರ್ಮುಲ ಪ್ರಕಾರ ಲೆಕ್ಕ ಮಾಡಲಾದ ಬಳಕೆ 289 ಎಂಟಿ ಮಾತ್ರ ಇದ್ದರೆ, ಸರ್ಕಾರದ ಬೇಡಿಕೆ ನಾಲ್ಕು ಪಟ್ಟು ಹೆಚ್ಚು ಅಂದರೆ 1,140 ಮೆಟ್ರಿಕ್ ಟನ್ಗಳಷ್ಟು ಇತ್ತು. ಆಕ್ಸಿಜನ್ನ ಈ ಹೆಚ್ಚುವರಿ ಪೂರೈಕೆಯು ಆಕ್ಸಿಜನ್ ಅಗತ್ಯವಿದ್ದ ಇತರ ರಾಜ್ಯಗಳಿಗೆ ತೊಂದರೆ ಉಂಟುಮಾಡಿತು” ಎಂದು ಸುಪ್ರೀಂ ಕೋರ್ಟ್ ಪಾನೆಲ್ನ ಮಧ್ಯಂತರ ವರದಿ ತಿಳಿಸಿದೆ.
ಇದನ್ನೂ ಓದಿ: ಲವರ್ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!
ದೆಹಲಿಯ ಸರಾಸರಿ ಆಕ್ಸಿಜನ್ ಬಳಕೆಯು 284 ರಿಂದ 372 ಎಂ.ಟಿ.ಗಳಷ್ಟಿತ್ತು. ಆದರೆ, ಕಡಿಮೆ ಬೆಡ್ಗಳಿದ್ದರೂ ಕೂಡ ದೆಹಲಿಯ ನಾಲ್ಕು ಆಸ್ಪತ್ರೆಗಳು ಅತ್ಯಧಿಕ ಆಕ್ಸಿಜನ್ ಬಳಕೆಯನ್ನು ತೋರಿಸಿವೆ. ದ ಸಿಂಘಾಲ್ ಹಾಸ್ಪಿಟಲ್, ಅರುಣ ಆಸಿಫ್ ಅಲಿ ಹಾಸ್ಪಿಟಲ್, ಇಸಿಐಸಿ ಮಾಡೆಲ್ ಹಾಸ್ಪಿಟಲ್ ಮತ್ತು ಲೈಫ್ರೇ ಹಾಸ್ಪಿಟಲ್ – ಈ ನಾಲ್ಕು ಕಡಿಮೆ ಬೆಡ್ಗಳ ಆಸ್ಪತ್ರೆಗಳು ಹೆಚ್ಚು ಬಳಕೆ ತೋರಿ ತಪ್ಪು ಮಾಹಿತಿ ನೀಡಿದ್ದವು. ಇದರಿಂದಾಗಿ ದೆಹಲಿಯ ಆಕ್ಸಿಜನ್ ಅಗತ್ಯವು ಉತ್ಪ್ರೇಕ್ಷೆ ಮಾಡಲ್ಪಟ್ಟಿತು ಎಂದು ವರದಿ ಹೇಳಿದೆ. (ಏಜೆನ್ಸೀಸ್)
VIDEO | ಬಿಜೆಪಿಯಿಂದ ಟಿಎಂಸಿ ಸೇರಿದವರಿಗೆ ಸ್ಯಾನಿಟೈಸರ್ ಸಿಂಪಡಿಸಿ ‘ಶುದ್ಧೀಕರಣ’!