ನವದೆಹಲಿ: ಪಾರ್ಕಿಂಗ್ ಸ್ಲಿಪ್ ನೀಡುವಲ್ಲಿ ಸ್ವಲ್ಪ ತಡವಾಗಿದ್ದಕ್ಕೆ ಬೈಕ್ ಸವಾರ ಹಾಗೂ ಮಾಲ್ನ ಸೆಕ್ಯೂರಿಟಿ ಗಾರ್ಡ್ ನಡುವೆ ಮಾರಮಾರಿ ಹೊಡೆದಾಟ ಆಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿ ಪೂರ್ವ ಭಾಗ ಆನಂದ್ ವಿಹಾರ್ ಪ್ರದೇಶದಲ್ಲಿ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಒದಿ: VIDEO| ಮೈಲಾರಿ ಹೋಟೆಲ್ ದೋಸೆ ರುಚಿಗೆ ಪ್ರಿಯಾಂಕ ಫಿದಾ; ಸ್ವತಃ ದೋಸೆ ಮಾಡಿದ ನಾಯಕಿ
ತಡ ಮಾಡಿದ್ದಕ್ಕೆ ಹಲ್ಲೆ
ಸದ್ಯ ವೈರಲ್ ಆಗಿರುವ ದೃಶ್ಯದಲ್ಲಿ ಬೈಕ್ ಸವಾರನ ಹೆಸರು ಹರ್ವೀಂದರ್ ಎಂದು ತಿಳಿದು ಬಂದಿದ್ದು ಹಲ್ಲೆಗೆ ಒಳಗಾದ ಸೆಕ್ಯೂರಿಟಿ ಗಾರ್ಡ್ ಹೆಸರು ಕೃಷ್ಣಪಾಲ್ ಎಂದು ತಿಳಿದು ಬಂದಿದೆ.
ಘಟನೆ ಸದ್ಯ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಬೈಕ್ ಸವಾರ ಹಾಗೂ ಸೆಕ್ಯೂರಿಟಿ ಗಾರ್ಡ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರನೆ ನಡೆಸುತ್ತಿದ್ದಾರೆ.