More

    ಚಿಕ್ಕಪಾಳ್ಯ ಬಸ್ ನಿಲ್ದಾಣದಲ್ಲಿ ಯುವಕನ ಶವ ಪತ್ತೆ

    ಶ್ರೀರಂಗಪಟ್ಟಣ: ತಾಲೂಕಿನ ಚಿಕ್ಕಪಾಳ್ಯದ ಗ್ರಾಮದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಯುವಕನ ಶವ ರಕ್ತದ ಮಡುವಿನಲ್ಲಿ ಅನುಮಾನಾಸ್ಪದವಾಗಿ ಬಿದ್ದಿರುವುದು ಪತ್ತೆಯಾಗಿದೆ.

    ತಾಲೂಕಿನ ಬೆಳಗೊಳ ಗ್ರಾಮದ ಪುಟ್ಟಸ್ವಾಮಿ ಆಚಾರಿ ಅವರ ಪುತ್ರ ಕಾರ್ತಿಕ್ (26) ಮೃತ ಯುವಕ. ವೃತ್ತಿಯಲ್ಲಿ ಈತ ಗಾರೆ ಕೆಲಸಗಾರನಾಗಿದ್ದು, ಮದ್ಯದ ಚಟಕ್ಕೆ ದಾಸನಾಗಿದ್ದನು. ಗ್ರಾಮದಲ್ಲಿರುವ ತನ್ನ ಮನೆಯಿಂದ ಗುರುವಾರ ಹೊರ ಹೋಗಿದ್ದ ಈತ ಅರಕೆರೆ ಹೋಬಳಿಯ ಚಿಕ್ಕಪಾಳ್ಯ ಗ್ರಾಮದ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಮುಂಜಾನೆ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವಕನ ಮೈಮೇಲೆ ಯಾವುದೇ ಬಲವಾದ ಹೊಡೆತ ಅಥವಾ ಗಾಯದ ಗುರುತು ಇಲ್ಲ. ಆದರೂ ಮೂಗು ಮತ್ತು ಕಿವಿಯ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿರುವುದು ಕಂಡು ಬಂದಿದ್ದು, ಹಲವು ಸಂಶಯಗಳಿಗೆ ಎಡೆ ಮಾಡಿದೆ.

    ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿರಬಹುದು ಎಂಬ ಸಾರ್ವಜನಿಕರು ಹಾಗೂ ಪಾಲಕರಿಂದ ಶಂಖೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಯುವಕನ ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts