More

    ಆಯಾಸ ಆಗುತ್ತಿದೆ ಎಂದಿದ್ರು, ಈಗ ಆರಾಮಿಲ್ಲ; ಮನೆಯಲ್ಲೇ ವಿರಾಮದಲ್ಲಿ ಡಿಸಿಎಂ..

    ಮುಂಬೈ: ಇತ್ತೀಚೆಗಷ್ಟೇ ಮಳೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಬಂದಿರುವ ಉಪ ಮುಖ್ಯಮಂತ್ರಿ, ಆಮೇಲೆ ಆಯಾಸ ಆಗುತ್ತಿರುವುದಾಗಿ ಹೇಳಿದ್ದರು. ಬಳಿಕ ಅನಾರೋಗ್ಯಕ್ಕೀಡಾಗಿರುವ ಅವರು ವೈದ್ಯರ ಸಲಹೆ ಮೇರೆಗೆ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಇತ್ತೀಚೆಗೆ ಪುಣೆ ಹಾಗೂ ಸೋಲಾಪುರ ಜಿಲ್ಲೆಗಳಲ್ಲಿನ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆಗ ಆಯಾಸವಾದ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಿದ್ದರು. ಅವರ ಸೂಚನೆ ಮೇರೆಗೆ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೆ ಅವರಿಗೆ ಏನಾಗಿದೆ, ಏನು ಸಮಸ್ಯೆ ಎಂಬ ಬಗ್ಗೆ ಆಸ್ಪತ್ರೆ ಮೂಲಗಳು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

    ಪವಾರ್ ಅವರು ಕರೊನಾ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್ ನೆಗೆಟಿವ್ ಬಂದಿರುವುದಾಗಿ ಎನ್​ಸಿಪಿ ವಕ್ತಾರ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ. ಸಾಮಾನ್ಯ ನಿತ್ರಾಣ ಬಿಟ್ಟರೆ ಬೇರೆ ಏನೂ ಅನಾರೋಗ್ಯ ಇಲ್ಲ ಎಂದಿದ್ದಾರೆ. ಆಯಾಸದ ಕಾರಣ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದಾರೆ. ಅದು ಬಿಟ್ಟರೆ ಅವರು ಕ್ರಿಯಾಶೀಲವಾಗಿಯೇ ಇದ್ದಾರೆ. ಗುರುವಾರವೂ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದಾರೆ ಎಂದು ಪವಾರ್ ಅವರ ಕಸಿನ್​, ಸಂಸದೆ ಸುಪ್ರಿಯಾ ಸುಲೆ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts