More

    ಕಿತ್ತೂರು ರಾಣಿ ಚನ್ನಮ್ಮನ ವೀರ ಜ್ಯೋತಿ ಯಾತ್ರೆಗೆ ಸ್ವಾಗತ

    ದಾವಣಗೆರೆ : ಕಿತ್ತೂರು ರಾಣಿ ಚನ್ನಮ್ಮ ಉತ್ಸವ ನಿಮಿತ್ತ ಆಗಮಿಸಿದ ವೀರ ಜ್ಯೋತಿ ಯಾತ್ರೆಯನ್ನು ನಗರದಲ್ಲಿ ಶುಕ್ರವಾರ ಸಂಜೆ ಸ್ವಾಗತಿಸಲಾಯಿತು.
     ಮಹಾತ್ಮ ಗಾಂಧಿ ವೃತ್ತದಲ್ಲಿ ಸ್ವಾಗತ ಕೋರಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ತಹಸೀಲ್ದಾರ್ ಡಾ.ಅಶ್ವತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ದೇವರಮನೆ ಶಿವಕುಮಾರ್ ಇನ್ನಿತರ ಮುಖಂಡರು ಇದ್ದರು.
     ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಾಗಿದ ರಥವು ಕಿತ್ತೂರು ರಾಣಿ ಚನ್ನಮ್ಮ ವೃತ್ತವನ್ನು ತಲುಪಿತು. ಅಲ್ಲಿ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ಕನ್ನಡ ಮರಿಯಾಚಾರ್ ಮಾಯಕೊಂಡ, ಎಂ.ದೊಡ್ಡಪ್ಪ, ಕಾಶಿನಾಥ್, ನೀಲಗುಂದ ಜಯ್ಯಮ್ಮ, ಮಲ್ಲಿನಾಥ್, ಮೀನಾ ಪ್ರಸಾದ್, ಅಂದನೂರು ವಸಂತಾ, ವೀಣಾ ನಟರಾಜ್ ಬೆಳ್ಳೂಡಿ, ಮುರಿಗೆಮ್ಮ, ಸುಧಾ, ವೀರಭದ್ರಪ್ಪ, ವಕೀಲ ಬಸವರಾಜ್ ಉಚ್ವಂಗಿದುರ್ಗ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts