ದಾವಣಗೆರೆ : ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಾಗಿದ್ದ 4 ಎಕರೆ ಸರ್ಕಾರಿ ಜಮೀನಿನ ಒತ್ತುವರಿಯನ್ನು ತಾಲೂಕು ಆಡಳಿತದಿಂದ ಗುರುವಾರ ತೆರವುಗೊಳಿಸಲಾಯಿತು.
ಈ ಜಮೀನನ್ನು ಖಾಸಗಿ ವ್ಯಕ್ತಿಗಳು 10ಕ್ಕೂ ಹೆಚ್ಚು ವರ್ಷಗಳಿಂದ ಒತ್ತುವರಿ ಮಾಡಿದ್ದರು. ಅಲ್ಲಿ ಕಬ್ಬು, ತೆಂಗು ಇನ್ನಿತರ ಬೆಳೆಗಳನ್ನು ಬೆಳೆದಿದ್ದರು. ಆದರೆ ಸಾರ್ವಜನಿಕರಿಗೆ ಸ್ಮಶಾನದ ಅಗತ್ಯವಿತ್ತು.
ನೋಟಿಸ್ ನೀಡಿದರೂ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಒತ್ತುವರಿ ತೆರವು ಮಾಡಲಾಯಿತು ಎಂದು ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ತಿಳಿಸಿದರು. ಅವರೊಂದಿಗೆ ಹದಡಿ ಠಾಣೆಯ ಪಿಎಸ್ಐ ಸಂಜೀವ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.