More

    ಕಾಂಗ್ರೆಸ್‌ನಿಂದ ವಿವೇಕಾನಂದರ ಪುಣ್ಯಸ್ಮರಣೆ

    ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ, ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.

    ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಭಾರತದ ಅಧ್ಯಾತ್ಮಿಕ, ವೈಚಾರಿಕ ಪರ್ವದಲ್ಲಿ ಸ್ವಾಮಿ ವಿವೇಕಾನಂದರು ವಹಿಸಿದ ಪ್ರಧಾನ ಪಾತ್ರ ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿ ಉಳಿದಿದೆ ಎಂದರು.

    ಅಮೆರಿಕ ಚಿಕಾಗೋದಲ್ಲಿನ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಹಿಂದು ಧರ್ಮವನ್ನು ಎಲ್ಲ ಧರ್ಮಗಳ ಮಾತೆ ಎಂದೂ, ಅದು ಸಮನ್ವಯ ಮಾತ್ರವಲ್ಲ, ಸ್ವೀಕಾರದ ಪಾಠವನ್ನು ವಿಶ್ವಕ್ಕೆ ಸಾರಿದೆ ಎಂದು ತಿಳಿಸಿದ್ದರು. ಇಂದಿನ ಯುವಜನತೆ ಅವರ ಆದರ್ಶಗಳನ್ನು ಪಾಲಿಸಬೇಕೆಂದರು.

    ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ದೇವರಮನೆ ಶಿವಕುಮಾರ್, ಪದವೀಧರರ ಸಂಘಟನೆಯ ಎಸ್.ಎಸ್.ಗಿರೀಶ್, ಜಿಲ್ಲಾ ಕಾಂಗ್ರೆಸ್ ಕಾರ‌್ಯದರ್ಶಿ ಎಸ್.ಮಲ್ಲಿಕಾರ್ಜುನ್, ಇಂಟೆಕ್‌ನ ಆನೆಕೊಂಡ ಲಿಂಗರಾಜ್, ಎನ್‌ಎಸ್‌ಯುಐನ ಮುಜಾಹಿದ್, ಯುವ ಕಾಂಗ್ರೆಸ್‌ನ ಮೈನುದ್ದೀನ್, ಕಿಸಾನ್ ಕಾಂಗ್ರೆಸ್‌ನ ಪ್ರವೀಣ್ ಕುಮಾರ್, ಅಸಂಘಟಿತ ಕಾರ್ಮಿಕರ ಸಂಘದ ಲಿಯಾಕತ್, ಪರಿಶಿಷ್ಟ ಘಟಕದ ರಂಗನಾಥ, ಹರೀಶ್, ಶ್ರೀಕಾಂತ್ ಬಗೇರ, ಪ್ರವೀಣ್ ಫಾರ್ಮ, ಯುವರಾಜ್, ಮೇಘರಾಜ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts