More

    ಆ. 3ರಂದು ಸಿಎಂ ಸಿದ್ದರಾಮಯ್ಯ ಜನ್ಮ ದಿನಾಚರಣೆ

    ದಾವಣಗೆರೆ : ನಗರದ ಎಲ್ಬಿಕೆ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನದ ಸಮಾರಂಭವನ್ನು ಆ. 3 ರಂದು ಬೆಳಗ್ಗೆ 11.30ಕ್ಕೆ ಹೊಂಡದ ವೃತ್ತದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಎನ್.ಎಂ. ಆಂಜನೇಯ ಗುರೂಜಿ ಹೇಳಿದರು.
     ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಡೆಯುವ ಸಮಾರಂಭದ ಉದ್ಘಾಟನೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮೇಯರ್ ವಿನಾಯಕ ಪೈಲ್ವಾನ್, ಕಾಂಗ್ರೆಸ್ ಮುಖಂಡರಾದ ಎಂ.ಟಿ. ಸುಭಾಷ್ ಚಂದ್ರ, ಲಕ್ಷ್ಮೀದೇವಿ ವೀರಣ್ಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
     ಟ್ರಸ್ಟ್ನಿಂದ 5ನೇ ಬಾರಿ ಸಿದ್ದರಾಮಯ್ಯ ಅವರ ಜನ್ಮದಿನ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮಕ್ಕೂ ಮುನ್ನ ಟ್ರಸ್ಟ್‌ನಿಂದ ವಯೋವೃದ್ಧರಿಗೆ, ಬಡವರಿಗೆ ಬ್ಲಾೃಂಕೆಟ್ ವಿತರಿಸಲಾಗುವುದು. ನಂತರ ಅಂಧ ಮತ್ತು ಅಂಗವಿಕಲ ಮಕ್ಕಳಿಗೆ ಹಣ್ಣು, ಸಿಹಿ ವಿತರಣೆ ಮಾಡಲಾಗುವುದು. ಅನ್ನಸಂತರ್ಪಣೆಯೂ ನಡೆಯಲಿದೆ ಎಂದರು.
     ಟ್ರಸ್ಟ್ ಗೌರವಾಧ್ಯಕ್ಷ ಬಿ. ವೀರಣ್ಣ, ವಿ. ಪ್ರಮೋದ್ ಕುಮಾರ್, ಶ್ಯಾಗಲೆ ಮಂಜುನಾಥ್, ಎಸ್.ಕೆ. ಸ್ವಾಮಿ, ಪರಶುರಾಮ್, ಚೇತನ್, ಆರ್.ಬಸಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts