More

    ಕುಡುತಿನಿಯಲ್ಲಿ ಮರ್ಯಾದಗೇಡು ಹತ್ಯೆ!

    * ಎಚ್‌ಎಲ್‌ಸಿ ಕಾಲುವೆಗೆ ನೂಕಿ ಮಗಳ ಕೊಲೆ
    * ತಂದೆ- ಮಗಳ ಕಾಣೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್

    ಕುಡುತಿನಿ(ಬಳ್ಳಾರಿ): ಜಿಲ್ಲೆಯ ಕುಡುತಿನಿ ಪಟ್ಟಣದಲ್ಲಿ ಮರ್ಯಾದಗೇಡು ಹತ್ಯೆಯಾಗಿದೆ. ತಂದೆ- ಮಗಳು ಕಾಣೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಬಾಲಕಿಯನ್ನು ಎಚ್‌ಎಲ್‌ಸಿ ಕೆನಾಲ್‌ಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ಪಟ್ಟಣದ ಬುಡ್ಗ ಜಂಗಮ ಕಾಲೋನಿ ನಿವಾಸಿ ಗಗನಶ್ರೀ(೧೫) ಮೃತ ಪಟ್ಟ ಬಾಲಕಿ. ತಂದೆ ಓಂಕಾರಗೌಡ(೪೫) ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ.

    ಅಪ್ಪಾ ಅಪ್ಪಾ ಎನ್ನುತ್ತಲೇ ಕೊಚ್ಚಿ ಹೋದಳು:
    ಮೃತ ಬಾಲಕಿ ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದು, ಅನ್ಯ ಕೋಮಿನ ಯುವಕನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ಕುರಿತಂತೆ ಗಮಳಿಗೆ ಸಾಕಷ್ಟು ಬಾರಿ ತಿಳಿ ಹೇಳಿದ್ದರು. ಯುವಕನಿಂದ ದೂರವಿರುವಂತೆ ಎಚ್ಚರಿಕೆಯನ್ನೂ ನೀಡಿದ್ದರು. ಪೋಷಕರ ಮಾತು ಕೇಳದೇ ಯುವಕನೊಂದಿಗೆ ಒಡನಾಟ ಮುಂದುವರೆಸುತ್ತಿದ್ದಳು.
    ಇದರಿಂದ ಕುಪಿತಗೊಂಡಿದ್ದ ಓಂಕಾರಗೌಡ, ಅ.೩೧ ರಂದು ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದ. ಅದಾಗಲೇ ಸಿನಿಮಾ ಆರಂಭವಾಗಿತ್ತು. ಅಲ್ಲಿಂದ ಹೊಟೇಲ್‌ಗೆ ಕರೆದೊಯ್ದು ತಿಂಡಿ ತಿನ್ನಿಸಿದ ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ್ದ. ಆಭರಣದ ಅಂಗಡಿಯಲ್ಲಿ ಒಂದು ಜತೆ ಓಲೆ, ಉಂಗುರ ಕೊಡಿಸಿದ್ದ. ಮರಳಿ ಊರಿಗೆ ಹಿಂತಿರುಗುವ ಹೊತ್ತಿಗೆ ರಾತ್ರಿಯಾಗಿತ್ತು. ಎಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳ ಕರೆತಂದು, ಸ್ವಲ್ಪ ಹೊತ್ತು ನಿಂತಿರು ಎಂದು ತಂದೆ ಕಣ್ಮರೆಯಾಗಿ, ಬಳಿಕ ಬಾಲಕಿಯನ್ನು ಎಚ್‌ಎಲ್‌ಸಿ ಕಾಲುವೆಗೆ ತಳ್ಳಿದ್ದಾನೆ. ಈ ವೇಳೆ ರಕ್ಷಣೆಗಾಗಿ ಬಾಲಕಿ ಅಪ್ಪ, ಅಪ್ಪ ಎಂದು ಕೂಗುತ್ತಲೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂಬುದು ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
    ಸದ್ಯ ಕೆನಾಲ್‌ನಲ್ಲಿ ಕೊಚ್ಚಿ ಹೋಗಿರುವ ಬಾಲಕಿಯ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

    ಕೊಲೆ ಮಾಡಿ ತಿಮ್ಮಪ್ಪನ ದರ್ಶನ:
    ಮಗಳನ್ನು ಕಾಲುವೆಗೆ ನೂಕು ಕೊಲೆ ಮಾಡಿದ ಬಳಿಕ ಆರೋಪಿ ಓಂಕಾರಗೌಡ, ತನ್ನ ದ್ವಿಚಕ್ರ ವಾಹನವನ್ನು ಸ್ನೇಹಿತ ಭೀಮಪ್ಪನ ಮನೆಯಲ್ಲಿ ಬಿಟ್ಟು ಪಾಪ ಕಳೆದು ಕೊಳ್ಳಲ್ಲು ತಿರುಪತಿಗೆ ತೆರಳಿದ್ದಾನೆ. ನಂತರ ಕುಡುತಿನಿಗೆ ಹಿಂದಿರುಗುವಾಗ ರೈಲಿನಲ್ಲಿ ಪೊಲೀಸರು ಬಂಧಿಸಿ ದ್ದಾರೆ. ತಂದೆ- ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts