More

    ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ನೀರಿನ ತೊಂದರೆ ಉಂಟಾಗಲಿದೆ..

    ಮೇಷ: ಮನದ ಇಷ್ಟಾರ್ಥಗಳಿಗೆ ಸಾಕಾರದ ಸಿದ್ಧಿ ದೊರೆಯಲಿದೆ. ದಟ್ಟವಾದ ಬಣ್ಣದ ಬಟ್ಟೆ ಧರಿಸದಿರಿ. ಚಿಂತೆಯಾದೀತು. ಶುಭಸಂಖ್ಯೆ: 6

    ವೃಷಭ: ನೀರಿನ ತೊಂದರೆಗಳು ಎದುರಾಗಬಹುದು. ಅಲರ್ಜಿಯವರು ಎಚ್ಚರದಿಂದಿರಬೇಕು. ಈಜು ಬರದೆ ನೀರಿಗೆ ಇಳಿಯದಿರಿ. ಶುಭಸಂಖ್ಯೆ: 4

    ಮಿಥುನ: ಬರಹಗಾರರಿಗೆ ಸಂತಸದ ದಿನವಿದು. ಸ್ವಂತ ಉದ್ಯಮದವರಿಗೆ ಯಶಸ್ಸನ್ನು ಅನುಭವಿಸುವ ದಿವಸ ಕೂಡ ಇದಾಗಿದೆ. ಶುಭಸಂಖ್ಯೆ: 9

    ಕಟಕ: ಮಕ್ಕಳಿಂದ ಖುಷಿಯ ವಿಚಾರವನ್ನು ಕೇಳಲಿದ್ದೀರಿ. ಕೆಲವರಿಗೆ ವಿದೇಶ ಪ್ರಯಾಣದ ಯೋಗವೂ ಬರಬಹುದು. ಶುಭಸಂಖ್ಯೆ: 2

    ಸಿಂಹ : ನಿಮ್ಮ ಪಾಲಿಗೆ ಚೇಳು ಕುಟುಕಿದ ಅನುಭವ ಉಂಟಾಗಬಹುದು. ಮಂತ್ರಾಲಯದ ಗುರುರಾಯರನ್ನು ಧ್ಯಾನಿಸಿ. ಶುಭಸಂಖ್ಯೆ: 5

    ಕನ್ಯಾ: ಹೈನುಗಾರಿಕೆಯ ವೃತ್ತಿಯವರಿಗೆ ನಿರಾಸೆಗಳೇ ಎದುರಾಗಬಹುದು. ಗೋಪಾಲಕೃಷ್ಣನನ್ನು ಭಕ್ತಿಯಿಂದ ಸ್ತುತಿ ಮಾಡಿ. ಶುಭಸಂಖ್ಯೆ: 8

    ತುಲಾ: ಸಿನಿಮಾ ಕಲಾವಿದರಿಗೆ ಹೊಸದೇ ಆದ ಸಾಹಸಮಯ ಅವಕಾಶಕ್ಕೆ ದಾರಿ ಇದೆ. ಸವಾಲುಗಳಿಗೆ ತಯಾರಾಗಿರಿ. ಶುಭಸಂಖ್ಯೆ: 3

    ವೃಶ್ಚಿಕ: ಬದುಕಿನಲ್ಲಿ ಪ್ರೀತಿ, ಪ್ರೇಮ ಮುಖ್ಯ. ಆದರೆ ಸಾಮಾಜಿಕ ಪರಿಸರದ ಬಗ್ಗೆಯೂ ತಿಳಿದಿರಲಿ. ಅವಸರ ಮಾಡಲು ಹೋಗದಿರಿ. ಶುಭಸಂಖ್ಯೆ: 7

    ಧನುಸ್ಸು: ತಿಳಿದಿರದ ದಾರಿಯಲ್ಲಿ ಹೋಗಿ ಮಧ್ಯೆಯೇ ಸಿಲುಕಬೇಡಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ರಾಮರಕ್ಷಾ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 1

    ಮಕರ : ಒಮ್ಮೆಲೇ ಹೊಸ ಪ್ರಯೋಗದ ಬಗ್ಗೆ ಪ್ರೇರಣೆ ಉಂಟಾಗಬಹುದು. ಆದರೆ ಆತುರ ಬೇಡ. ರ್ತಾಕ ಆಲೋಚನೆ ಇರಲಿ. ಶುಭಸಂಖ್ಯೆ: 6

    ಕುಂಭ : ಹೊಸ ದಾರಿಯಲ್ಲಿ ಸಿಗಬಹುದಾದ ಎಲ್ಲವೂ ಉತ್ತೇಜನಕಾರಿಯಾಗಿ ಇರದು. ಸಾಮಾನ್ಯ ಜ್ಞಾನ, ವ್ಯವಧಾನ ಮರೆಯಾಗದಿರಲಿ. ಶುಭಸಂಖ್ಯೆ: 9

    ಮೀನ : ದಾಂಪತ್ಯ ಬಂಧನದ ಪ್ರಾಮುಖ್ಯತೆ ಅರಿವಿಗೆ ಬರಲಿದೆ. ಬಾಳಸಂಗಾತಿಗೆ ಅಸಂತೋಷವನ್ನು ಉಂಟುಮಾಡದಿರಿ. ಒಳಿತಿದೆ. ಶುಭಸಂಖ್ಯೆ: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts