More

    ನಿತ್ಯಭವಿಷ್ಯ|ಈ ರಾಶಿಯವರಿಗೆ ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಇಂದು ಮಂಜಿನಂತೆ ಕರಗಲಿದೆ

    ಮೇಷ: ಯೋಗ್ಯರಲ್ಲದವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವಂತಹ ಆತುರದಲ್ಲಿದ್ದೀರಿ. ಆದರೆ ಅದು ಕೆಡುಕಿಗೆ ಕಾರಣವಾದೀತು. ಶುಭಸಂಖ್ಯೆ: 4

    ವೃಷಭ: ಕೆಲವರು ಹರಳುಗಳನ್ನು ಖರೀದಿ ಮಾಡಲು ಮುಂದಾಗಬಹುದು. ತೊಂದರೆ ಇಲ್ಲ. ಆದರೆ ಪರಿಣತ ಜನರನ್ನು ಸಂರ್ಪಸಿ. ಶುಭಸಂಖ್ಯೆ: 8

    ಮಿಥುನ: ಹೃದಯದ ಆರೋಗ್ಯದ ಬಗ್ಗೆ ಅಲಕ್ಷಿಸುತ್ತಿದ್ದೀರಿ. ಹಾಗೆ ನಿರ್ಲಕ್ಷ್ಯ ತೋರಿಸದೆಯೇ ಯೋಗ್ಯರಾದ ವೈದ್ಯರ ಸಲಹೆಗಳನ್ನು ಸ್ವೀಕರಿಸಿ. ಶುಭಸಂಖ್ಯೆ: 3

    ಕಟಕ: ಸದ್ಯಕ್ಕೆ ಮಾನಸಿಕ ದೃಢತೆಯೇ ಮುಖ್ಯವಾಗಿದೆ. ಅದರಿಂದ ಹೊಸ ಲಾಭದಾಯಕ ಕಾರ್ಯಕ್ಷಮತೆಗೆ ಸಿದ್ಧಿಯ ಸಾಫಲ್ಯ ಲಭಿಸುತ್ತದೆ. ಶುಭಸಂಖ್ಯೆ: 7

    ಸಿಂಹ: ಭಾವನಾತ್ಮಕ ಸ್ಪಂದನೆಗಳು ತೀವ್ರವಾಗಿಲ್ಲದಿದ್ದರೆ ಉತ್ತಮ. ಇಲ್ಲದಿದ್ದರೆ ವ್ಯಾವಹಾರಿಕ ಸೋಲುಗಳು ಮತ್ತೆ ಮತ್ತೆ ಕಾಡಬಹುದಾಗಿದೆ. ಶುಭಸಂಖ್ಯೆ: 9

    ಕನ್ಯಾ: ದುರಾಸೆಗಳಿಂದ ಕೆಲಸಗಳನ್ನು ಪೂರೈಸಿಕೊಳ್ಳಲು ಮುಂದಾಗದಿರಿ. ಸಾಧ್ಯವಾದಷ್ಟು ಸೌಹಾರ್ದವಾದ ನಡತೆಯಿಂದಲೇ ನೆಮ್ಮದಿ ಇದೆ. ಶುಭಸಂಖ್ಯೆ: 1

    ತುಲಾ: ತಪ್ಪುತಪ್ಪಾದ ಮಾಹಿತಿ ನೀಡುವಂತಹ ಜನರೂ ಇದ್ದೇ ಇರುತ್ತಾರೆ. ಅಂತಹ ವ್ಯಕ್ತಿಗಳ ಬಗ್ಗೆ ಸ್ವಲ್ಪ ಎಚ್ಚರ, ಕಠಿಣ ಭಾವನೆ ಬೇಕು. ಶುಭಸಂಖ್ಯೆ: 5

    ವೃಶ್ಚಿಕ: ಹೆಚ್ಚುವರಿಯಾದ ಲಾಭವನ್ನು ವೃಥಾ ಖರ್ಚು ಮಾಡಬೇಕು ಎನಿಸಬಹುದು. ಸುರಕ್ಷಿತವಾಗಿ ತೊಡಗಿಸಿದರೆ ಲಾಭವಾಗಲಿದೆ. ಶುಭಸಂಖ್ಯೆ: 2

    ಧನುಸ್ಸು: ಬಾಳಸಂಗಾತಿಯ ಆರೋಗ್ಯದ ಬಗೆಗೆ ಕಾಳಜಿ ತೋರಿಸಬೇಕಾಗುತ್ತದೆ. ಕುಟುಂಬ ವೈದ್ಯರ ಬಳಿ ಬೇಗ ತೋರಿಸಿದರೆ ಕ್ಷೇಮವಿದೆ. ಶುಭಸಂಖ್ಯೆ: 6

    ಮಕರ: ಕೆಲಸಗಳ ಮಧ್ಯೆ ಕುಟುಂಬದ ಜವಾಬ್ದಾರಿಗಳ ನಿರ್ವಹಣೆಯನ್ನು ತಪ್ಪಿ ಕೂಡ ಮರೆಯದಿರಿ. ಮನಸ್ತಾಪಗಳಿಂದ ದೂರವಿರಿ. ಶುಭಸಂಖ್ಯೆ: 4

    ಕುಂಭ: ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಮಂಜಿನಂತೆ ಕರಗಲಿದೆ. ಭಕ್ತಿಯಿಂದ ಕುಲದೇವರನ್ನು ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 8

    ಮೀನ: ಹೊಸ ಹೂಡಿಕೆಗಳು ಲಾಭಕರವಾಗಿರುತ್ತವೆ ಎಂಬುದೇನೋ ಸತ್ಯ. ಆದರೆ ಒಮ್ಮೆಲೇ ದೊಡ್ಡ ಮಟ್ಟದ ಬಂಡವಾಳ ಹಾಕದಿರಿ. ಶುಭಸಂಖ್ಯೆ: 3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts