More

    ಡಿ.ದೇವರಾಜ ಅರಸು ಆದರ್ಶ ಪಾಲಿಸಿ

    ರಾಯಬಾಗ: ಸಾಮಾಜಿಕ ನ್ಯಾಯದ ಹರಿಕಾರ, ಪ್ರಗತಿಪರ ಸಾಧನೆಗಳ ಸರದಾರ ಡಿ.ದೇವರಾಜ ಅರಸು ಆದರ್ಶ ಜೀವನ, ತತ್ತ್ವಗಳು ಯುವಪೀಳಿಗೆಗೆ ಮಾದರಿ ಎಂದು ಪ್ರಾಚಾರ್ಯ ಡಾ.ವಿ.ಎಸ್.ಮಾಳಿ ಹೇಳಿದ್ದಾರೆ. ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

    ತಹಸೀಲ್ದಾರ್ ಎನ್.ಬಿ.ಗೆಜ್ಜಿ, ತಾಪಂ ಅಧ್ಯಕ್ಷೆ ಸಜಾತಾ ಪಾಟೀಲ, ಉಪಾಧ್ಯಕ್ಷೆ ಸವಿತಾ ನಾಯಿಕ, ಡಿ.ಎಸ್.ನಾಯಿಕ, ಡಾ.ಎಸ್.ಎಸ್.ಬಾನೆ, ತಾಲೂಕು ವಿಸ್ತರಣಾಧಿಕಾರಿ ಆರ್.ಎಸ್.ಪಾಟೀಲ, ಬಿಇಒ ಬಿ.ಎ.ಮೇಕನಮರ್ಡಿ, ತಾಪಂ ಸದಸ್ಯರಾದ ನಾಮದೇವ ಕಾಂಬಳೆ, ಶ್ರವಣ ಕಾಂಬಳೆ, ಇಂಧೂದರ ಹಿರೇಮಠ, ಸಂತೋಷ ಕಾಂಬಳೆ, ಸುದೀಪ ಚೌಗಲಾ, ಎಎಸ್‌ಐ ಎಸ್.ಬಿ.ಖೋತ ಮತ್ತಿತರರು ಉಪಸ್ಥಿತರಿದ್ದರು. ಎ.ಪಿ.ಬೊಮ್ಮನವರ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts