More

    ಸೈಕಲ್ ಏರಿ ಕ್ಷೇತ್ರ ಸುತ್ತಿದ ಶಾಸಕ ಅಭಯ

    ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಭಾನುವಾರ ಬೆಳಗ್ಗೆ ಸೈಕಲ್ ಏರಿ ತಮ್ಮ ಕ್ಷೇತ್ರದಲ್ಲಿ ಸುತ್ತಾಡಿ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು.

    ಸ್ಥಳೀಯರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ದಕ್ಷಿಣ ಮತಕ್ಷೇತ್ರದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಸುತ್ತಿಲ್ಲ. ಕಸ ಸಂಗ್ರಹ ನಿರ್ವಹಣೆಯಲ್ಲಿ ಲೋಪಗಳಿದ್ದು, ವಾರದಲ್ಲಿ ಸರಿಪಡಿಸಿಕೊಳ್ಳದಿದ್ದರೆ ಕಸವನ್ನು ಅಧಿಕಾರಿಗಳ ಕಾರಿ ನಲ್ಲಿ ಸುರಿಯುವ ಜನಾಂದೋಲನ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸೈಕಲ್ ಸವಾರಿ ಮಾಡಿದ ಶಾಸಕರ ಎದುರು ನೂರಾರು ಸಮಸ್ಯೆ ಹಾಗೂ ದೂರುಗಳು ಕೇಳಿಬಂದವು. ದೂರು ಆಲಿಸಿದ ಶಾಸಕ ಅಭಯ ಪಾಟೀಲ, ಆ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು. ಸಾರ್ವಜನಿಕರಿಂದ ಕೇಳಿಬಂದ ಸಮಸ್ಯೆಗಳ ನಿವಾರಣೆಗೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts