More

    ಶೃಂಗೇರಿಯಲ್ಲಿ ತುಂಬಿ ತುಳುಕುತ್ತಿರುವ ತುಂಗೆ

    ಶೃಂಗೇರಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೀವನದಿ ತುಂಗೆ ತುಂಬಿ ತುಳುಕುತ್ತಿದೆ.

    ಗಾಂಧಿ ಮೈದಾನ ಜಲಾವೃತ ಹಿನ್ನೆಲೆಯಲ್ಲಿ ಭಾರತಿ ಬೀದಿಯಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ಗ್ರಾಮೀಣ ಪ್ರದೇಶ ಹಾಲಂದೂರು, ಕಿಕ್ರೆ, ಸಸಿಮನೆ, ಕೆರೆಕಟ್ಟೆ, ನೆಮ್ಮಾರ್, ಕಿಗ್ಗಾ, ಮೆಣಸೆ ಮುಂತಾದೆಡೆ ಅತಿಯಾದ ಮಳೆಯಾಗಿದ್ದು ಕೃಷಿ ಕಾರ್ಯ ಸ್ಥಗಿತಗೊಂಡಿದೆ.
    ತುಂಗಾ ನದಿ ಸಮೀಪ ಇರುವ ಕಪ್ಪೆಶಂಕರ ದೇವಾಲಯ ಸಂಪೂರ್ಣ ಮುಳುಗಿದ್ದು, ಅದರ ಮೇಲೆ ಸುಮಾರು ಐದು ಅಡಿ ನೀರು ತುಂಬಿದೆ. ನರಸಿಂಹವನದ ಗುರುನಿವಾಸಕ್ಕೆ ತೆರಳುವ ಅಕ್ಕಪಕ್ಕದಲ್ಲಿರುವ ಅಡಕೆ ತೋಟಗಳು ಹಾಗೂ ಸಂಧ್ಯಾಮಂಟಪ ಜಲಾವೃತವಾಗಿವೆ. ತಾಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ವಿದ್ಯಾರಣ್ಯಪುರ, ಸಸಿಮನೆ ಮುಂತಾದ ಕಡೆಯಿಂದ ಶೃಂಗೇರಿಗೆ ಬರುವ ಸಂಪರ್ಕ ಕಡಿತಗೊಂಡಿದೆ.
    ಕೆರೆಕಟ್ಟೆ ಸಮೀಪದ ನೆಮ್ಮಾರ್‌ಮಕ್ಕಿ, ಗುಲಗುಂಜಿಮನೆ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ಮಂಗಳೂರಿನಿಂದ ಶೃಂಗೇರಿಗೆ ಬರುವ ವಾಹನಗಳ ಸವಾರರು ಪರದಾಡುವಂತಾಯಿತು. ಹಲವೆಡೆ ಗುಡ್ಡಗಳು ಜರಿದಿವೆ. ವರುಣನ ಆರ್ಭಟದಿಂದ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts