ಚೆನ್ನೈ: ನಿನ್ನೆ (ಮೇ 01) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಪಂಜಾಬ್ ಏಳು ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿತು. ಈ ಮ್ಯಾಚ್ನಲ್ಲಿ 17.4ನೇ ಓವರ್ನಲ್ಲಿ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡ ಸಿಎಸ್ಕೆ ಹೆಚ್ಚು ರನ್ ಕಲೆಹಾಕುವಲ್ಲಿ ಹಿಂದುಳಿಯಿತು. ರುತುರಾಜ್ ಪೆವಿಲಿಯನ್ ಕಡೆ ಹೋಗುತ್ತಿದ್ದಂತೆ ಕ್ರೀಸ್ಗೆ ಬಂದ ಮಹೇಂದ್ರ ಸಿಂಗ್ ಧೋನಿ ಮೇಲೆ ಹೆಚ್ಚಿನ ಭರವಸೆ ಮೂಡಿತು. ಆದರೆ ಈ ಮಧ್ಯೆ ನಡೆದ ಒಂದು ಘಟನೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ನಾನು ಹೇಳಲು ತುಂಬಾ ಇದೆ, ಆದ್ರೆ ಮೌನವಾಗಿದ್ದೇನೆ; ಪಾಕ್ ಕ್ರಿಕೆಟಿಗನಿಂದ ದೂರವಾದ ಸಾನಿಯಾ
ಪಂದ್ಯದ ವೇಳೆ ಎಂ.ಎಸ್. ಧೋನಿ ಅವರ ನಡೆ ಇದೀಗ ಭಾರೀ ಟೀಕೆಗೆ ಗುರಿಯಾಗಿದೆ. ಕಡೆಯ ಓವರ್ನಲ್ಲಿ ಸ್ಫೋಟಕ ಆಟಗಾರ ಡರೈಲ್ ಮಿಚೆಲ್ಗೆ ಧೋನಿ ಕ್ರೀಸ್ ಕೊಡದೆ ವಾಪಸ್ ನಾನ್ ಸ್ಟ್ರೈಕರ್ ವಿಭಾಗಕ್ಕೆ ಓಡಿಸಿದ ದೃಶ್ಯ ಕ್ರೀಡಾಭಿಮಾನಿಗಳು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಸೇರಿದಂತೆ ಕೆಲವರು ‘ಕ್ಯಾಪ್ಟನ್ ಕೂಲ್’ ನಡೆಯನ್ನು ಖಂಡಿಸಿದ್ದಾರೆ.
ಒಂದೆಡೆ ಧೋನಿ ಮಾಡಿದ್ದು ಅಕ್ಷಮ್ಯ. ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಡರೈಲ್ ಮಿಚೆಲ್ಗೆ ಕ್ರೀಸ್ ಬಿಟ್ಟುಕೊಡಬಹುದಿತ್ತು. ಅದನ್ನು ಮಾಡದೆ, ಸ್ಟ್ರೈಕರ್ ಎಂಡ್ಗೆ ಓಡಿಬಂದ ಆಟಗಾರನನ್ನು ಮಾಹಿ ವಾಪಾಸ್ ಕಳಿಸಿದ್ದು ಸರಿಯಲ್ಲ. ದಿಗ್ಗಜ ಆಟಗಾರನಾಗಿ ಅವಕಾಶ ಕೊಡಬೇಕಿತ್ತು ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಆದರೆ, ಇದೆಲ್ಲವನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು, ಧೋನಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಅಂತಿಮ ಓವರ್ ಹತ್ತಿರವಿದ್ದಾಗ ಕೇವಲ ಒಂದೆರೆಡು ರನ್ ಗಳಿಸುವುದಕ್ಕಿಂತ ಸಿಕ್ಸರ್ ಮತ್ತು ಫೋರ್ಗಳನ್ನು ಸಿಡಿಸುವುದು ಉತ್ತಮ ಎಂಬ ನಿಟ್ಟಿನಿಂದ ಧೋನಿ ತಮ್ಮ ಸ್ಟ್ರೈಕ್ ಕೊಡದೆ ಉಳಿಸಿಕೊಂಡರು ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಪ್ತಪದಿ ತುಳಿದ ಟಗರು ಪುಟ್ಟಿ ಮಾನ್ವಿತಾ ಕಾಮತ್
ಅಸಲಿಗೆ ನಡೆದಿದ್ದೇನು?
ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಚೆನ್ನೈ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಚೆನ್ನೈ ನೀಡಿದ್ದ 163 ರನ್ಗಳ ಗುರಿಯನ್ನು 17.5 ಓವರ್ಗಳಲ್ಲೇ ಪಂಜಾಬ್ ಮುಟ್ಟಿತು. ಇದರೊಂದಿಗೆ 10 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಪಂಜಾಬ್ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಇನ್ನಿಂಗ್ಸ್ ವೇಳೆ ಕೊನೆಯ ಓವರ್ ಬೌಲಿಂಗ್ ಮಾಡಲು ಅರ್ಷದೀಪ್ ಸಿಂಗ್ ಬಂದಿದ್ದರು. ಈ ವೇಳೆ ಕ್ರೀಸ್ನಲ್ಲಿ ಧೋನಿ-ಡರೈಲ್ ಮಿಚೆಲ್ ಇದ್ದರು. ಧೋನಿ ಸ್ಟ್ರೈಕರ್ ವಿಭಾಗದಲ್ಲಿದ್ದರೆ, ಸಹಜವಾಗಿ ಬೌಲರ್ಗಳ ಮೇಲೆ ಸ್ವಲ್ಪ ಒತ್ತಡವಿರುತ್ತದೆ. ಹೀಗಾಗಿಯೇ ಅರ್ಷದೀಪ್ ಮೊದಲ ಎಸೆತವನ್ನು ವೈಡ್ ಎಸೆದರು.
ನಂತರದ ಎಸೆತವನ್ನು ಧೋನಿ ಬೌಂಡರಿ ಬಾರಿಸಿದರು. ಆ ಬಳಿಕ ಅರ್ಷದೀಪ್ ಮತ್ತೊಂದು ವೈಡ್ ಬೌಲ್ ಮಾಡಿದರು. ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಆದರೆ, ಶಾಟ್ ಸರಿಯಾಗಿ ಕನೆಕ್ಟ್ ಆಗಲಿಲ್ಲ. ಚೆಂಡು ಗಾಳಿಯಲ್ಲಿ ಹಾರಿತು. ಈ ವೇಳೆ ನಾನ್ ಸ್ಟ್ರೈಕರ್ ವಿಭಾಗದಲ್ಲಿ ಡರೈಲ್ ಮಿಚೆಲ್ ರನ್ಗಾಗಿ ಓಡಿದರು. ಆದರೆ ಧೋನಿ ಅವರನ್ನು ಹಿಂದಕ್ಕೆ ಹೋಗುವಂತೆ ಹೇಳಿದರು. ಆದರೆ ಅದಾಗಲೇ ಡರೈಲ್ ಮಿಚೆಲ್, ಧೋನಿ ಇದ್ದ ಕ್ರೀಸ್ಗೆ ಹೋಗಿದ್ದರು ಮತ್ತು ವಾಪಸ್ ಬಂದರು. ಅಷ್ಟರಲ್ಲಿ ಫೀಲ್ಡರ್ ಚೆಂಡನ್ನು ಎಸೆದರು. ಆದರೆ ಚೆಂಡು ವಿಕೆಟ್ಗೆ ತಾಗದ ಕಾರಣ ಮಿಚೆಲ್ ರನ್ ಔಟ್ನಿಂದ ಪಾರಾದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತವನ್ನು ಧೋನಿ ಸಿಕ್ಸರ್ಗೆ ಬಾರಿಸಿದರು. ಈ ಪಂದ್ಯದಲ್ಲಿ ಧೋನಿ 11 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 14 ರನ್ ಗಳಿಸಿದರು.
ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್ ಗಂಭೀರ್
ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರ: ಕೆ. ಅಣ್ಣಾಮಲೈ ಕೊಟ್ಟ ಪ್ರತಿಕ್ರಿಯೆ ಹೀಗಿದೆ