More

    ವಿವಾದಿತ ಜಮೀನಿನಲ್ಲಿ ಶವಸಂಸ್ಕಾರ

    ಹೊಳೆಹೊನ್ನೂರು: ಸಮೀಪದ ಕನಸಿನಕಟ್ಟೆ ಗ್ರಾಮದ ವಿವಾದಿತ ಜಮೀನಿನಲ್ಲಿ ಶವ ಸಂಸ್ಕಾರ ಮಾಡುವಲ್ಲಿ ಗ್ರಾಮಾಡಳಿತ ಸಫಲವಾಗಿದೆ. ಕನಸಿನಕಟ್ಟೆ ಗ್ರಾಮದ ಸ್ಮಶಾನದ ಜಮೀನನ್ನು ಜಂಬರಘಟ್ಟೆ ವ್ಯಕ್ತಿಯೊಬ್ಬ ಕಳೆದ ಎರಡು ವರ್ಷಗಳ ಹಿಂದೆ ಅಕ್ರಮ ಖಾತೆ ಮಾಡಿಕೊಂಡಿದ್ದು ಈ ಜಮೀನು ಮೂಲತಃ ಕೆರೆಕಟ್ಟೆ ಎಂದು ದಾಖಲೆ ಇದೆ. ಕನಸಿನಕಟ್ಟೆ ಗ್ರಾಮದ ಜನರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಗ್ರಾಮಕ್ಕೆ ಸ್ಮಶಾನ ಅವಶ್ಯಕತೆಯಿದೆ. ಈ ಸ್ಥಳವನ್ನು ಸ್ಮಶಾನಕ್ಕೆ ಮೀಸಲಿಡಲು ಮನವಿ ಸಲ್ಲಿಸಿ ಅನುಮತಿ ಪಡೆದಿದ್ದರು.
    ಗ್ರಾಮದ ಕೃಷ್ಣಪ್ಪ (65) ವಯೋಸಹಜ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿ ವಿವಾದಿತ ಸ್ಥಳದಲ್ಲಿ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಆಗಮಿಸಿದ ಸಂದರ್ಭದಲ್ಲಿ ಜಂಬರಘಟ್ಟೆ ವ್ಯಕ್ತಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿರುತ್ತಾನೆ.
    ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಭದ್ರಾವತಿ ತಹಸೀಲ್ದಾರ್ ಸುರೇಶಾಚಾರ್ ಸ್ಥಳಕ್ಕೆ ಆಗಮಿಸಿ ಈ ಪ್ರಕರಣ ನ್ಯಾಯಾಲಯದಲ್ಲಿದ್ದು ತೀರ್ಪು ಬರುವವರೆಗೆ ಎರಡು ಕಡೆಯವರು ಅನುಸರಿಸಿಕೊಂಡು ಹೋಗುವಂತೆ ನೀಡಿ ಸಲಹೆ ಮೇರೆಗೆ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts