More

    ಕಾಣೆಯಾಗಿದ್ದ ಕರೊನಾ ರೋಗಿ ಶೌಚಾಲಯದಲ್ಲಿ ಶವವಾಗಿ ಪತ್ತೆ

    ಜಲಗಾಂವ್: ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಎಂಟು ದಿನಗಳ ಹಿಂದೆ ನಾಪತ್ತೆಯಾದ, ಭೂಸಾವಲ್ ಮೂಲದ ವೃದ್ಧೆ (82) ಅದೇ ಆಸ್ಪತ್ರೆಯ ಶೌಚಾಲಯದೊಳಗೆ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.

    ಇದನ್ನೂ ಓದಿ: ‘ಆ ದಿನಗಳು’ : ಶತಕದ ಸಂಭ್ರಮದಲ್ಲಿರುವ ವಾಯುಪಡೆಯ ಹಿರಿಯ ಸೇನಾನಿಯ ಅವಿಸ್ಮರಣೀಯ ನೆನಪುಗಳೇನು?

    ಜಿಲ್ಲಾಪೇಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅಕ್ಬರ್ ಪಟೇಲ್ ಹೇಳುವಂತೆ, ಜಲಗಾಂವ್ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ಆಕೆಯ ಕುಟುಂಬಸ್ಥರು ಜೂನ್ 2 ರಂದು ಆಕೆ ಕಾಣಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
    ನಂತರ ಭೂಸಾವಲ್​​​ನಲ್ಲಿ ಸಂಪೂರ್ಣ ವಿಚಾರಣೆ ನಡೆಸಲಾಗಿತ್ತು. ಆಕೆಯ ಸಂಬಂಧಿಕರ ಸಮ್ಮುಖದಲ್ಲೇ ಎಲ್ಲ ರೋಗಿಗಳ ರೆಜಿಸ್ಟರ್​​​ಗಳನ್ನು ಪರಿಶೀಲಿಸಿದ್ದೂ ಆಗಿತ್ತು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ನಂತರ ಜೂನ್ 6 ರಂದು ದೂರು ದಾಖಲಿಸಿರುವುದಾಗಿ ಪಟೇಲ್ ತಿಳಿಸಿದರು.

    ಇದನ್ನೂ ಓದಿ: ಪತಿಗೆ ತಿಳಿಯದೇ ಮಾಡಿದಳು ಕಿತಾಪತಿ: ಪತ್ನಿಯನ್ನೇ ಯಾಮಾರಿಸಿ ಓಡಿಹೋದ ಪ್ರೇಮಿ!

    ಮೇ 27 ರಂದು ಆ ವೃದ್ಧೆಗೆ ಪರೀಕ್ಷೆ ನಡೆಸಲಾಗಿದ್ದು, ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮೊದಲು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಣೆಯಾದ ಮಾಹಿತಿ ಬಂದ ನಂತರ ತನಿಖೆಗಾಗಿ ಪೊಲೀಸ್ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿತ್ತು.

    ಇದನ್ನೂ ಓದಿ: ಪೂರ್ವಜ ಇಲ್ಯಾಕೆ ಬಂದಿದ್ದ ಗೊತ್ತಾ? ಕೇಳಿದರೆ ಅಯ್ಯೋ ಪಾಪ ಅನ್ಸುತ್ತೆ

    ಜೂನ್ 2 ರವರೆಗೆ ಆಕೆ ವಾರ್ಡ್​​​ನಲ್ಲಿ ಕಾಣಿಸಿಕೊಂಡಿದ್ದರೆಂದು ಜಲಗಾಂವ್ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದು, ನಂತರ ಆಕೆ ಎಲ್ಲಿದ್ದಾರೆ ಎಂದು ತಿಳಿದಿರಲಿಲ್ಲ. ಇಂದು ಆಸ್ಪತ್ರೆಯ ಶೌಚಾಲಯವೊಂದರಲ್ಲಿ ದುರ್ವಾಸನೆ ಬಂದಿದ್ದು. ಹೋಗಿ ನೋಡಿದಾಗ ಅಲ್ಲಿ ಮಹಿಳೆಯ ಶವ ಕಂಡುಬಂತು. ಈ ಕುರಿತು ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪಟೇಲ್ ಹೇಳಿದರು.

    ಇದನ್ನೂ ಓದಿ:20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?

    ಅಜ್ಜಿಯ ಸಾವಿನಿಂದ ಆಕ್ರೋಶಗೊಂಡ ಆಕೆಯ ಮೊಮ್ಮಗ ಈ ಸಾವಿನ ಪ್ರಕರಣದ ತನಿಖೆ ನಡೆಸಿ, ನಿರ್ಲಕ್ಷ್ಯವಹಿಸಿದ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ವೀಡಿಯೋ ಸಂದೇಶ ಕಳುಹಿಸಿ ಮನವಿ ಮಾಡಿದ್ದಾರೆ.
    ಕಳೆದ ಮೂರು ದಿನಗಳಲ್ಲಿ ಕಾಣೆಯಾದ ಕೋವಿಡ್ -19 ರೋಗಿಗಳು ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ.

    ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೊವಿಡ್​-19 ಟೆಸ್ಟ್ ರಿಪೋರ್ಟ್​ನಲ್ಲಿ ಹೊರಬಿದ್ದ ಸತ್ಯವೇ ಬೇರೆ…

    ಮಂಗಳವಾರ, ಕೋವಿಡ್ -19 ರೋಗದಿಂದ ಬಳಲುತ್ತಿದ್ದ 80 ವರ್ಷದ ವೃದ್ಧನ ಶವ ಪತ್ತೆಯಾದ ನಂತರ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ತನಿಖೆಗೆ ಆದೇಶಿಸಿದ್ದರು. ಆ ರೋಗಿ ಭಾನುವಾರ ಕಂಡಿವಲಿಯ ಡಾ.ಬಿ.ಆರ್. ಅಂಬೇಡ್ಕರ್ ಶತಾಬ್ದಿ ಆಸ್ಪತ್ರೆಯಿಂದ ಕಾಣಿಯಾಗಿದ್ದು, ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಶವ ಬೋರಿವಲಿ ನಿಲ್ದಾಣದ ಬಳಿ ಪತ್ತೆಯಾಗಿತ್ತು.

    ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts