More

    ಇಳಿಕೆಯಾಗುತ್ತಿದೆ ಪಾಸಿಟಿವಿಟಿ ದರ, ಭಯ ಬೇಡ: ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಹೇಳಿಕೆ

    ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 18ರಿಂದ ಶೇ8ಕ್ಕೆ ಇಳಿಕೆಯಾಗಿದೆ. ಸಂಖ್ಯೆ ಜಾಸ್ತಿ ಕಂಡರೂ ಯಾವುದೇ ಭೀತಿ ಬೇಡ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

    ದ.ಕ ಜಿಲ್ಲಾಡಳಿತ, ದ.ಕ ರೆಡ್‌ಕ್ರಾಸ್ ಸೊಸೈಟಿ, ರೋಟರಿ ಕ್ಲಬ್, ಬ್ಯಾಂಕ್ ಆಫ್ ಬರೋಡಾ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಅಶಕ್ತರು, ಬಸ್, ಆಟೋ ಸಿಬ್ಬಂದಿಯ ಲಸಿಕಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಶುಕ್ರವಾರ ಒಂದೇ ದಿನ 11 ಸಾವಿರ ಕೋವಿಡ್ ಪರೀಕ್ಷೆ ಮಾಡಿರುವುದರಿಂದ ಪಾಸಿಟಿವ್ ಆದವರ ಸಂಖ್ಯೆಯೂ 1006 ಬಂದಿತ್ತು. ಹಿಂದೆ ಕೇವಲ 4 ಸಾವಿರ ಪರೀಕ್ಷೆಯಷ್ಟೇ ಆಗುತ್ತಿತ್ತು. ಈಗ ಪಾಸಿಟಿವಿಟಿ ದರ ಇಳಿಯುತ್ತಿರುವುದರಿಂದ ಆತಂಕ ಪಡಬೇಕಾಗಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts