More

    ಗಂಧ ಕದ್ದು ಸಿಕ್ಕಿ ಬಿದ್ದ; ಕರೊನಾ ಸೋಂಕಿತನಾಗಿ ಪರಾರಿ ಆದ!

    ಕಾರವಾರ: ಕರೊನಾ ಸೋಂಕಿತರು ಆಸ್ಪತ್ರೆಯಿಂದ ಪರಾರಿ ಆಗುತ್ತಿರುವ ವಿಚಾರ ಹೊಸದೇನಲ್ಲ. ಈಗಾಗಲೇ ಕೆಲವು ಸೋಂಕಿತರು ಆಸ್ಪತ್ರೆಯಿಂದ ಪರಾರಿ ಆಗಿದ್ದು ವರದಿಯಾಗಿದೆ. ಅದೇ ಥರ ಇಲ್ಲೊಬ್ಬ ಪರಾರಿಯಾಗಿರುವುದು ಗಮನ ಸೆಳೆದಿದೆ.

    ಮುಂಡಗೋಡಿನ ಸೈಯದ್ ಇಸ್ರಾಲ್​ ಕರೀಮ್​ ಖಾನ್​ ಪರಾರಿಯಾಗಿರುವ ಕರೊನಾ ಸೋಂಕಿತ. ಅದಕ್ಕಿಂತಲೂ ಮುಖ್ಯವಾದದ್ದೆಂದರೆ ಈತ ಗಂಧ ಕಳ್ಳ. ಮುಂಡಗೋಡಿನಲ್ಲಿ ಗಂಧದ ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಅಕ್ಟೋಬರ್ ಏಳರಂದು ಈತನನ್ನು ಬಂಧಿಸಲಾಗಿತ್ತು.

    ಬಂಧನದ ಬಳಿಕ ನಡೆಸಿದ್ದ ಕರೊನಾ ಪರೀಕ್ಷೆಯಲ್ಲಿ ಕೋವಿಡ್​-19 ಪಾಸಿಟಿವ್ ಎಂಬುದು ದೃಢಪಟ್ಟಿದ್ದರಿಂದ ಈತನನ್ನು ಉತ್ತರ ಕನ್ನಡ ಜಿಲ್ಲೆ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್​ ಸೆಂಟರ್​ಗೆ ದಾಖಲಿಸಲಾಗಿತ್ತು. ಆದರೆ ಈತ ಅಲ್ಲಿಂದಲೇ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಪೊಲೀಸರು, ಸೋಂಕಿತ ಕಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.

    ಗಂಧ ಕದ್ದು ಸಿಕ್ಕಿ ಬಿದ್ದ; ಕರೊನಾ ಸೋಂಕಿತನಾಗಿ ಪರಾರಿ ಆದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts