More

    ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

    ಸಾಗರ: ನಗರ ಹಾಗೂ ಗ್ರಾಮಾಂತರ ಪ್ರದೇಶದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಅಶೋಕ ನಗರದ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

    ತಾಲೂಕಿನ ತುಮರಿಯಲ್ಲಿ ಮೂರು ಮನೆ ಕಳವು ಪ್ರಕರಣ, ನಗರ ವ್ಯಾಪ್ತಿಯಲ್ಲಿ ಮೂರು ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 9 ಮನೆ ಕಳ್ಳತನ ಹಾಗೂ ಎರಡು ಬೈಕ್ ಕಳ್ಳತನಕ್ಕೆ ಸಂಬಂಸಿ ಶಿವಮೊಗ್ಗದ ಅಶೋಕ ನಗರದ ವಾಸಿಗಳಾದ ನದೀಮ್ ಮತ್ತು ಇಲಿಯಾಸ್ ಎಂಬುವವರನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ತಾಲೂಕಿನ ಆನಂದಪುರ ಸಮೀಪದ ಮುಂಬಾಳು ಗ್ರಾಮದ ಬಳಿ ಅನುಮಾನಾಸ್ಪದವಾಗಿ ತಿರುಗತ್ತಿದ್ದ ನದೀಮ್ ಹಾಗೂ ಇಲಿಯಾಸ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಮನೆ ಮತ್ತು ಬೈಕ್ ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದಾರೆ.

    ಬಂಧಿತರಿಂದ 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ಮೌಲ್ಯದ 2 ಬೈಕ್ ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನೂ ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಜಿಲ್ಲಾ ರಕ್ಷಣಾಕಾರಿ ಕೆ.ಎಂ.ಶಾಂತರಾಜು, ಎಎಸ್​ಪಿ ಎಚ್.ಟಿ.ಶೇಖರ್, ಡಿ.ವೈ.ಎಸ್.ಪಿ. ವಿನಾಯಕ್ ಎನ್. ಶೆಟಿಗೇರ್, ನಗರ ಠಾಣೆ ವೃತ್ತ ನಿರೀಕ್ಷಕ ಅಶೋಕಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸಬ್ ಇನ್ಸ್​ಪೆಕ್ಟರ್ ಭರತ್ ಕುಮಾರ್, ಸಿಬ್ಬಂದಿಗಳಾದ ಶೇಕ್ ಫೈರೋಜ್, ಸಂತೋಷ್ ನಾಯ್್ಕ ಅಶೋಕ್, ಹಜರತ್ ಅಲಿ, ಕಾಳಾನಾಯ್್ಕ ರವಿಕುಮಾರ್, ಲಕ್ಷ್ತ್ರ್ಮ್ ಹಾಗೂ ಶಿವಮೊಗ್ಗ ಎ.ಎನ್.ಸಿ. ವಿಭಾಗದ ಇಂದ್ರೇಶ್, ಗುರು, ವಿಜಯ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts