ಮಂಗಳೂರು: ಮೊದಲೆಲ್ಲ ವಿದೇಶಿಗರನ್ನು ಕುತೂಹಲದಿಂದ ನೋಡಲಾಗುತ್ತಿತ್ತು. ಆದರೆ ಈಗ ಭಯದಿಂದ ನೋಡುವಂತಾಗಿದೆ. ಅದಕ್ಕೆ ಕಾರಣ ಮಾತ್ರ ಖಂಡಿತವಾಗಿಯೂ ಕರೊನಾ ವೈರಸ್..!
ಸದ್ಯಕ್ಕಂತೂ ವಿದೇಶಿಗರ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೀಗಿರುವಾಗ ಮಂಗಳೂರಿನಲ್ಲಿ ನೈಜೀರಿಯಾ ಪ್ರಜೆಯೋರ್ವ ಕಾಣಿಸಿಕೊಂಡು ಆತಂಕ ಮೂಡಿಸಿದ್ದಾನೆ.
ಮಂಗಳೂರು ನವಭಾರತ್ ಸರ್ಕಲ್ನಲ್ಲಿ ತಿರುಗಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ನೋಡಿದ ಸ್ಥಳೀಯರು ಭಯದಿಂದ ಕೂಡಲೇ ಪೊಲೀಸರಿಗೆ ಹಾಗೂ ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಬಳಿಕ ಆ ನೈಜೀರಿಯಾ ಪ್ರಜೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.