ನೆಲ್ಲಿಕುಡುರು: ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯ ನೆಲ್ಲಿಕುಡುರು ಗ್ರಾಮದ ಒಂದೇ ಕುಟುಂಬದ ನಾಲ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಘಟನೆ ಮಹಾಮಾರಿ ಕರೊನಾ ವೈರಸ್ ತೀವ್ರತೆಗೆ ಸಾಕ್ಷಿಯಾಗಿದೆ.
ಮದ್ದಿ ಭಿಕ್ಸಮ್ (65) ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ವೀರಣ್ಣ (40) ನೆಲ್ಲಿಕುಡುರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿದ್ದರು. ಎರಡನೇ ಮಗ ರಾಮಚಂದ್ರ ಹೈದರಾಬಾದ್ನಲ್ಲಿ ವಾಸವಿದ್ದರು. ಮೂರನೇ ಮಗ ಉಪೇಂದರ್ (32) ಹನ್ಮಕೊಂಡದಲ್ಲಿ ನೆಲೆಸಿದ್ದರು.
ಇತ್ತಿಚೆಗೆ ಭಿಕ್ಸಮ್ ದಂಪತಿ ಮೆಹಬೂಬಬಾದ್ನಲ್ಲಿರುವ ವೀರಣ್ಣ ಮನೆಗೆ ಹೋಗಿದ್ದರು. ವೀರಣ್ಣರಿಗೆ ಆರೋಗ್ಯ ಹದಗೆಟ್ಟಿತ್ತು. ಕೋವಿಡ್ ಪಾಸಿಟಿವ್ ಹಿನ್ನಲೆಯಲ್ಲಿ ಅವರನ್ನು ಗುಡುರು ವಲಯದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಅಲ್ಲಿಂದ ಹೈದರಾಬಾದ್ಗೆ ಸ್ಥಳಾಂತರಿಸಲಾಯಿತು.
ಇತ್ತ ವೀರಣ್ಣ ತಂದೆ ಭಿಕ್ಸಮ್ ಅವರಿಗೂ ಸೋಂಕು ತಗುಲಿತ್ತು. ಮೊದಲೇ ವಯಸ್ಸಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಭಿಕ್ಷಮ್ ಮೇ 2ರಂದು ಮೃತಪಟ್ಟಿದ್ದರು. ವೀರಣ್ಣ 4ನೇ ತಾರೀಖಿನಂದು ಕೊನೆಯುಸಿರೆಳೆದಿದ್ದರು.
ಭಿಕ್ಸಮ್ ಮೂರನೇ ಪುತ್ರ ಉಪೇಂದರ್ ಮೊದಲನೇ ಅಲೆಯ ಸಂದರ್ಭದಲ್ಲಿ ಅಂದರೆ ನವೆಂಬರ್ 11 ರಂದು ಸೋಂಕಿಗೆ ಬಲಿಯಾಗಿದ್ದರು. ಇದೀಗ ಭಿಕ್ಸಮ್ ಪತ್ನಿ ಮಂಗಮ್ಮ (60) ಕರೊನಾದಿಂದ ಗುರುವಾರ ಮೃತಪಟ್ಟಿದ್ದಾರೆ. (ಏಜೆನ್ಸೀಸ್)
ಮುಂದಿನ ವಾರದಿಂದ ದೇಶಿ ಮಾರುಕಟ್ಟೆಗಳಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಲಭ್ಯ: ಬೆಲೆ ಹೀಗಿದೆ ನೋಡಿ!