ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಕರೊನಾ ಅಟ್ಟಹಾಸ ಮೆರಯುತ್ತಿದೆ. ಧಾರ್ಮಿಕ ಕಾರ್ಯಕ್ರಮಕ್ಕೆಂದು ಗುಜರಾತ್ಗೆ ಹೋಗಿ ಬಂದಿದ್ದ ಮುಧೋಳದ 17 ತಬ್ಲಿಘಿಗಳ ಪೈಕಿ 14 ಮಂದಿಗೆ ಸೋಂಕು ಧೃಡಪಟ್ಟಿದ್ದು, ಇಡೀ ಜಿಲ್ಲೆ ಬೆಚ್ಚಿಬಿದ್ದಿದೆ. ಮುಧೋಳ ನಗರದಲ್ಲಿ ಮಂಗಳವಾರ ಒಂದೇ ದಿನ 15 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68 ಕ್ಕೇರಿದೆ.
ಇದನ್ನೂ ಓದಿ ಕರೊನಾ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯ ಸಾವು; ಊರಲ್ಲಿ ಆತಂಕ
ಮಂಗಳವಾರ ಪತ್ತೆಯಾದ 15 ಸೋಂಕಿತರ ಪೈಕಿ 14 ಮಂದಿಗೆ ಗುಜರಾತ್ ನಂಟಿದೆ. ಮತ್ತೊಬ್ಬ ಸೋಂಕಿತನ (Influenza Like Illness) ಹೊರ ಸಂಪರ್ಕ ತಿಳಿದುಬಂದಿಲ್ಲ. ಮಾ. 3ರಂದು ಮುಧೋಳದಿಂದ ತೆರಳಿದ್ದ ತಂಡ ಅಹಮದಾಬಾದ್ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿತ್ತು. ಅಲ್ಲಿಂದ ಮೇ 8ರಂದು ಮುಧೋಳ ನಗರಕ್ಕೆ 17 ಜನರ ತಂಡ ವಾಪಸ್ ಬಂದಿತ್ತು. ಅವರೆಲ್ಲರನ್ನೂ ಇಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಮೇ 10ರಂದು 17 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈ ಪೈಕಿ 14 ಜನರ ವರದಿ ಕರೊನಾ ಪಾಸಿಟಿವ್, ಮೂವರ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದವರ ವರದಿ ಮೊದಲು ನೆಗೆಟಿವ್ ಬಂದಿತ್ತಂತೆ!
ಇದನ್ನೂ ಓದಿ ಎಟಿಎಂ ಒಳಗೆ ಹಾವಿದೆ… ಜೋಕೆ!
ಈ 17 ಜನರ ತಂಡವನ್ನೂ ಅಹಮದಾಬಾದ್ನಲ್ಲೇ ಕ್ವಾರಂಟೈನ್ ಮಾಡಿ ಸ್ವಾಬ್ ಟೆಸ್ಟ್ ಮಾಡಲಾಗಿತ್ತಂತೆ. ನಮ್ಮ ವರದಿ ನೆಗೆಟಿವ್ ಬಂದಿತ್ತು ಎಂದು ಅವರು ಹೇಳಿದ್ದರು. ಈಗ ಮತ್ತೊಮ್ಮೆ ಇಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದ್ದು, ಗುಜರಾತ್ ನಂಟಿನ ಕಂಟಕ ಬಾಗಲಕೋಟೆ ಜಿಲ್ಲೆಯನ್ನು ತೀವ್ರವಾಗಿ ಕಾಡುತ್ತಿದೆ.
ಈ ಮೊದಲು ಮುಧೋಳ ತಾಲೂಕಿನಲ್ಲಿ ಒಟ್ಟು ಒಂಭತ್ತು ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತೆ 15 ಜನರಲ್ಲಿ ಪತ್ತೆಯಾಗಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 24ಕ್ಕೇರಿದೆ.
ಇದನ್ನೂ ಓದಿ 900ರ ಗಡಿ ದಾಟಿತು COVID19 ಪ್ರಕರಣಗಳ ಸಂಖ್ಯೆ- ಹೊಸದಾಗಿ 42 ಕೋವಿಡ್ ಪ್ರಕರಣ ದೃಢ