ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದಿನವರೆಗೆ ರಾಜ್ಯದಲ್ಲಿ 14 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮುಂಬೈ ಮತ್ತು ಅಹಮದಾಬಾದ್ನಿಂದ ಬಂದವರೇ ಹೆಚ್ಚು.
ಮುಂಬೈನಿಂದ ಪ್ರಯಾಣ ಬೆಳೆಸಿದ್ದ ಹಾವೇರಿ ಜಿಲ್ಲೆ ಶಿಗ್ಗಾವಿಯ 26 ವರ್ಷದ ಯುವಕ, ಹಾಸನದ 30 ವರ್ಷದ ಮಹಿಳೆ ಹಾಗೂ ಮಂಡ್ಯದ 38 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುಜರಾತ್ನ ಅಹಮದಾಬಾದ್ನಿಂದ ಬಂದಿರುವ ಬಾಗಲಕೋಟೆ ಬನಹಟ್ಟಿಯ 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.
ಇದನ್ನೂ ಓದಿ: ದಾವೂದ್ ಜತೆ ಕೈಜೋಡಿಸಿದ ಲಷ್ಕರ್ನಿಂದ ಭಾರತದ ಮೇಲೆ ದಾಳಿ: ಬೆಚ್ಚಿ ಬೀಳಿಸೋ ವರದಿ ಇಲ್ಲಿದೆ…
ಇದನ್ನು ಹೊರತುಪಡಿಸಿದರೆ, ಈಗಾಗಲೇ ಸೋಂಕಿತರ ಸಂಪರ್ಕದಲ್ಲಿದ್ದ ಕಲಬುರಗಿಯ 1, ದಾವಣಗೆರೆಯ 3, ಬಾಗಲಕೋಟೆ ಜಿಲ್ಲೆ ಬಾದಾಮಿಯ 1, ವಿಜಯಪುರದ 1, ಬೀದರ್ನ 2, ಬೆಂಗಳೂರು ನಗರದ 1, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಂಧ್ರ ಪ್ರದೇಶ ಅನಂತಪುರದ 1 ಪ್ರಕರಣ ಬೆಳಕಿಗೆ ಬಂದಿದೆ. 31 ಮಂದಿ ಸೋಂಕಿನಿಂದ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕಂಡುಬಂದಿರುವ ಹೊಸ ಸೋಂಕು ಪ್ರಕರಣಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯೋಮಾನದವರೇ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸತ್ತರೂ ಚಿಂತೆಯಿಲ್ಲ, ಮಾಸ್ಕ್ ಹಾಕದೇ ಸೇವೆ ಸಲ್ಲಿಸು ಎಂದು ವೈದ್ಯನಿಗೆ ಅಪ್ಪ ಹೇಳಿದ್ದೇಕೆ?
ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂಬ ವಿವರ ಇಲ್ಲಿದೆ: