More

    ಸಲೂನ್​​ಗಳು ತೆರೆದಿದ್ದರೂ ನೀವು ಹೋಗೋ ಮುನ್ನ ಇನ್ನೊಮ್ಮೆ ಯೋಚಿಸಿ…ಈ ಘಟನೆ ನಡೆದದ್ದು ಉಡುಪಿಯಲ್ಲಿ !

    ಉಡುಪಿ: ಲಾಕ್​ಡೌನ್​ನಿಂದಾಗಿ ಸಲೂನ್​​ಗಳೆಲ್ಲ ಬಂದ್​ ಆಗಿದ್ದವು. ಹಾಗಾಗಿ ಅದೆಷ್ಟೋ ಜನರು ಸರಿಯಾಗಿ ಹೇರ್ ಕಟಿಂಗ್​ ಮಾಡಿಸಲಾಗದೆ ಕಷ್ಟಪಟ್ಟಿದ್ದುಂಟು. ಈಗ ಲಾಕ್​ಡೌನ್ ಸಡಿಲಿಕೆಯಾಗಿದ್ದು, ಕೆಲವೆಡೆ ಕ್ಷೌರದ ಅಂಗಡಿಗಳು ಬಾಗಿಲು ತೆರೆದು ಕಾರ್ಯ ಆರಂಭಿಸಿವೆ. ಜನರೂ ಸಹ ತಲೆ ಭಾರ ಕಡಿಮೆ ಮಾಡಿಕೊಳ್ಳಲು ಅಲ್ಲಿಗೆ ಓಡುತ್ತಿದ್ದಾರೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​

    ಆದರೆ, ಹೀಗೆ ಸಲೂನ್​ಗಳಿಗೆ ಹೋಗುವ ಮುನ್ನ ಎಚ್ಚರ ಇರಲಿ. ಯಾಕೆಂದರೆ ಇಲ್ಲೊಂದು ಸಲೂನ್​​ನಲ್ಲಿ ಕರೊನಾ ಸೋಂಕಿತ ಹೇರ್​ ಕಟಿಂಗ್ ಮಾಡಿಸಿದ ಪರಿಣಾಮ ಅದೀಗ ಬಂದ್​ ಆಗಿದೆ.

    ಉಡುಪಿಯ ಕಾಪು ತಾಲೂಕಿನಲ್ಲಿ ಘಟನೆ ನಡೆದಿದೆ. ಜಿಲ್ಲಾ ಪಂಚಾಯಿತಿಯ ಹೊರಗುತ್ತಿಗೆ ನೌಕರನೋರ್ವ ವಾರದ ಹಿಂದೆ ಸರಕಾರಿ ಗುಡ್ಡೆಯಲ್ಲಿ ಕ್ಷೌರ ಮಾಡಿಸಿದ್ದ. ಆದರೆ ಈ ಯುವಕನಿಗೆ ಕರೊನಾ ಇರುವುದು ನಿನ್ನೆ (ಸೋಮವಾರ) ದೃಢಪಟ್ಟಿದೆ. ಇದೀಗ ಕ್ಷೌರದ ಅಂಗಡಿ ಬಂದ್​ ಆಗಿದ್ದು, ಆ ಯುವಕ ಬಂದು ಹೋದ ಮೇಲೆ ಯಾರ್ಯಾರು ಬಂದಿದ್ದರೋ ಅವರನ್ನೆಲ್ಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸಲೂನ್​ ಮಾಲೀಕರು ಸಹ ಆತಂಕದಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts