More

    ಶಿರಾಳಕೊಪ್ಪದಲ್ಲಿ ಗುತ್ತಿಗೆದಾರನ ಇರಿತಕ್ಕೆ ಉದ್ಯಮಿ ಬಲಿ

    ಶಿವಮೊಗ್ಗ/ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗುತ್ತಿಗೆದಾರ ಉದ್ಯಮಿ ಮತ್ತು ಅವರ ಪುತ್ರನಿಗೆ ಶನಿವಾರ ಬೆಳಗ್ಗೆ ಚಾಕುವಿನಿಂದ ಇರಿದಿದ್ದು, ತೀವ್ರವಾಗಿ ಗಾಯಗೊಂಡ ಉದ್ಯಮಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಅವರ ಪುತ್ರನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
    ಶಿರಾಳಕೊಪ್ಪದ ವಿಜಯ ಸ್ಟೋರ್ ಮಾಲೀಕ ಎ.ಆರ್.ದಯಾನಂದ್(69) ಕೊಲೆಯಾಗಿದ್ದು ಆತನ ಪುತ್ರ ರಾಘವೇಂದ್ರ(40) ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಚಾಕುವಿನಿಂದ ಇರಿದ ಸೊರಬ ತಾಲೂಕು ಚನ್ನಾಪುರದ ಕೊಟ್ರೇಶ್ ಪರಾರಿಯಾಗಿದ್ದಾರೆ.
    ಶಿಕಾರಿಪುರ ರಸ್ತೆಯ ಶ್ರೀಧರ್ ನರ್ಸಿಂಗ್ ಹೋಮ್ ಪಕ್ಕ ದಯಾನಂದ್ ಅವರು ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕೊಟ್ರೇಶ್‌ಗೆ ಈ ಕಟ್ಟಡ ನಿರ್ಮಾಣದ ಗುತ್ತಿಗೆ ನೀಡಲಾಗಿತ್ತು. ಕೊಟ್ರೇಶ್ ಸರಿಯಾಗಿ ಕಟ್ಟಡ ಕಾಮಗಾರಿ ನಿರ್ವಹಣೆ ಮಾಡದ ಕಾರಣ ಆತನನ್ನು ದಯಾನಂದ್ ಗುತ್ತಿಗೆ ಕೆಲಸದಿಂದ ಬಿಡಿಸಿದ್ದರು. ನಂತರ ಕೊಟ್ರೇಶ್, ಇಲ್ಲಿವರೆಗೂ ಮಾಡಿದ ಕೆಲಸದ ಬಾಬ್ತು ನೀಡುವಂತೆ ದಯಾನಂದ್ ಅವರಿಗೆ ಹಲವು ಬಾರಿ ಕೇಳಿದ್ದರೂ ಅವರು ಕೊಟ್ಟಿರಲಿಲ್ಲ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಹೊಸ ಕಟ್ಟಡದ ಬಳಿ ಬಂದು ಬಾಕಿ ಹಣವನ್ನು ನೀಡುವಂತೆ ಕೊಟ್ರೇಶ್ ಕೇಳಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
    ಈ ವೇಳೆ ಕೊಟ್ರೇಶ್ ತನ್ನ ಬಳಿ ಇದ್ದ ಚಾಕುವಿನಿಂದ ದಯಾನಂದ್ ಅವರ ಹೊಟ್ಟೆಗೆ ಇರಿದಿದ್ದು, ಗಲಾಟೆ ಬಿಡಿಸಲು ಬಂದ ಅವರ ಪುತ್ರ ರಾಘವೇಂದ್ರನಿಗೂ ಚಾಕು ಹಾಕಿದ್ದಾನೆ. ದಯಾನಂದ್ ಅವರನ್ನು ಶಿರಾಳಕೊಪ್ಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಪುತ್ರ ರಾಘವೇಂದ್ರ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts