ಹಾಸನ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ನಾಯಕರಿಗೆ ಸ್ವಾಗತ ಕೋರುವ ವಿಚಾರದಲ್ಲಿ ತಿಕ್ಕಾಟ ಶುರುವಾಗಿದ್ದು, ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬಡಿದಾಡಿಕೊಂಡರು. ಹಿರಿಯ ಮುಖಂಡರು ಕೆಲಕಾಲ ಮೂಕ ಪ್ರೇಕ್ಷಕರಾಗಿದ್ದರು.
ಇದನ್ನೂ ಓದಿರಿ ಮೈ ಭೀ ದುಃಖಿ ಹ್ಞೂ ಅಂತಾರೆ ಪ್ರಧಾನಿ: ಮಲ್ಲಿಕಾರ್ಜುನ ಖರ್ಗೆ ಟೀಕೆ
ಕಾಂಗ್ರೆಸ್ ಸಭೆಯಲ್ಲಿ ಸ್ವಾಗತ ಭಾಷಣ ಮಾಡುವಾಗ ಅಲ್ಪಸಂಖ್ಯಾತ ಮುಖಂಡರ ಹೆಸರು ಹೇಳಲಿಲ್ಲ ಎಂದು ಆಕ್ರೋಶಗೊಂಡ ಒಂದು ಗುಂಪು, ‘ಓಟು ಹಾಕೋಕೆ ನಾವು ಬೇಕು. ನಮ್ಮ ನಾಯಕರ ಹೆಸರು ಹೇಳೋಕೆ ಮಾತ್ರ ನಿಮಗೆ ಮುಜುಗರ..’ ಎಂದಿತು. ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ಎದ್ದು ನಿಂತಿತು. ಈ ವೇಳೆ ಎರಡೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡರು.
ಇದನ್ನೂ ಓದಿರಿ ದೀಪಿಕಾ ಹೇಳಿಕೊಂಡ ತಮ್ಮ ರಿಯಲ್ ಲೈಫ್ ಲವ್ ಸ್ಟೋರಿ …
ಕಾರ್ಯಕರ್ತರ ಗಲಾಟೆ ವೇಳೆ ಅಸಹಾಯಕರಾಗಿ ಹಿರಿಯ ನಾಯಕರು ಕೂತಿದ್ದರು. ಕಡೆಗೆ ತಾವೇ ಎದ್ದು ನಿಂತು ಮಾತನಾಡಿದ ಸಲೀಂ ಅಹ್ಮದ್, ‘ನಮಗೆ ಯಾವುದೇ ಜಾತಿ ಇಲ್ಲ. ನೀವೆಲ್ಲ ಹೀಗೆ ಕಿತ್ತಾಡಬೇಡಿ. ಗಲಾಟೆ ಮಾಡಿದವರ ಪಟ್ಟಿ ಕೊಡಿ. ನಾಳೆಯೇ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಎಚ್ಚರಿಸಿದರು.
ಒಟ್ಟಾರೆ ಗೊಂದಲದ ಗೂಡಾಗಿದ್ದ ಸಭೆಯಲ್ಲಿ ಕರೊನಾ ಭಯವೂ ಇಲ್ಲದಂತೆ ದೈಹಿಕ ಅಂತರ ಮರೆತದ್ದು ವಿಪರ್ಯಾಸ.
ಇದನ್ನೂ ನೋಡಿ
ಕಾಂಗ್ರೆಸ್ ಸಭೆಯಲ್ಲಿ ಹೇಗೆ ಕಿತ್ತಾಡಿಕೊಂಡ್ರು ನೋಡಿ…
ಕಾಂಗ್ರೆಸ್ ಸಭೆಯಲ್ಲಿ ಹೇಗೆ ಕಿತ್ತಾಡಿಕೊಂಡ್ರು ನೋಡಿ…ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಪರಸ್ಪರ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡರು. ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್ ಸಮ್ಮುಖದಲ್ಲೇ ಬಡಿದಾಡಿಕೊಂಡರು. ಸ್ವಾಗತ ಭಾಷಣದಲ್ಲಿ ಅಲ್ಪಸಂಖ್ಯಾತ ಮುಖಂಡರ ಹೆಸರು ಹೇಳಲಿಲ್ಲ ಎಂಬ ವಿಚಾರಕ್ಕೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತ್ತು. ಹೆಚ್ಚಿನ ಮಾಹಿತಿ ಇದನ್ನು ಕ್ಲಿಕ್ ಮಾಡಿ..#Congress #Meeting #Viral #Video #Hassan #KPCC #SalimAhmed #Argument #Fight
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜೂನ್ 1, 2020