More

    ಜನರ ಆರ್ಶೀವಾದದ ಎದುರು ಯಾವ ಅಲೆಯೂ ಇಲ್ಲ: ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಹೇಳಿಕೆ

    ಮಂಡ್ಯ: ಜನರ ಆಶೀರ್ವಾದದ ಮುಂದೆ ಯಾರ ಅಲೆಯೂ ನಡೆಯುವುದಿಲ್ಲ ಎಂಬುದಕ್ಕೆ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಫಲಿತಾಂಶವೇ ನಿದರ್ಶನ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ ಹೇಳಿದರು.
    ಜಿಲ್ಲೆಯ ಮತದಾರರರು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಂಸದೆ ಸುಮಲತಾ ಮಾತಿಗೆ ಸೊಪ್ಪು ಹಾಕದೆ ಕಾಂಗ್ರೆಸ್-ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಆರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯ ಮತದಾರರಿಗೆ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕೋಮುವಾದಿ, ಜಾತಿ ರಾಜಕಾರಣ ಮುಂದಿಟ್ಟು ಚುನಾವಣೆ ಎದುರಿಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕಪಾಠ ಕಲಿಸಿದ್ದಾರೆ. ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ ಸೇರಿದಂತೆ ಇತರರು ಉರೀಗೌಡ ಮತ್ತು ನಂಜೇಗೌಡರ ಹೆಸರಿನಲ್ಲಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು. ಜಿಲ್ಲೆಯಲ್ಲಿ ಕೋಮುವಾದಿಗಳ ಇಂತಹ ಯಾವುದೇ ಆಟಗಳು ನಡೆಯುವುದಿಲ್ಲ. ಶಾಂತಿಯ ನಾಡಲ್ಲಿ ಅಶಾಂತಿ ಸೃಷ್ಠಿಸಲು ಹೋದ ಸಿ.ಟಿ.ರವಿ ಇದೀಗ ಸೋತು ಮನೆ ಸೇರಿಕೊಂಡಿದ್ದಾರೆ ಎಂದು ಟೀಕಿಸಿದರು.
    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸಂಸದರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಯುವ ನಾಯಕ ರಾಹುಲ್‌ಗಾಂಧಿ ಅವರನ್ನು ಪ್ರಧಾನಿ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆ ಅಭಿವೃದ್ಧಿ ಮಾಡುವುದು ಪಕ್ಷದ ಶಾಸಕರ ಗುರಿಯಾಗಿದೆ. ಜಿಲ್ಲಾ ಅಭಿವೃದ್ಧಿ ಸಮಿತಿ ರಚಿಸಿ ಎಲ್ಲ ಸಮುದಾಯಗಳಿಂದ ಸಮಿತಿಗೆ ತಜ್ಞರನ್ನು ನೇಮಕಗೊಳಿಸಿ ಅವರ ಸಲಹೆ ಪಡೆದು ಮೈಷುಗರ್ ಕಾರ್ಖಾನೆ, ರೈಲ್ವೆ ಮೇಲ್ಸೆತುವೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮುಂದಾಗಲಿದ್ದೇವೆ ಎಂದರು.
    ಮುಖಂಡರಾದ ಸುಧಾ, ಭಾಗ್ಯಮ್ಮ, ರಾಧಾ, ಕೃಷ್ಣಮೂರ್ತಿ, ಲಿಂಗರಾಜು, ಯೋಗೇಶ್, ಹರ್ಷ, ಚಲುವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts