More

    ಕರ್ತವ್ಯನಿರತ ಪೊಲೀಸ್​ ಅಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನ! ವಿಡಿಯೋ ವೈರಲ್​

    ಉತ್ತರಕನ್ನಡ: ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ವಾಹನ ಹರಿಸಲು ಯತ್ನಿಸಿದ ಘಟನೆ ಸೋಮವಾರ ನಡೆದಿದ್ದು, ಈ ಸಂಬಂಧ ನಾಲ್ವರನ್ನು ಪೊಲಿಸರು ಬಂಧಿಸಿದ್ದಾರೆ.

    ಅಂಕೋಲಾದ ಹಟ್ಟಿಕೇರಿ ಟೋಲ್​ನಲ್ಲಿ ಎಎಸ್​ಪಿ ಮೇಲೆ ಕಾರು ಹರಿಸಲು ಯತ್ನಿಸಿದ ಕಾಂಗ್ರೆಸ್​ ಮುಖಂಡನೂ ಆದ ಉದ್ಯಮಿ ಸುರೇಶ ನಾಯಕ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ಪ್ರಿಯತಮೆಯ ಓಲೈಕೆಗಾಗಿ ಆಕೆಯ ಮಗುವನ್ನೇ ಕೊಂದು ಮೂಟೆಕಟ್ಟಿ ಎಸೆದ ಪ್ರಿಯಕರ! ಬೆಚ್ಚಿಬೀಳಿಸುತ್ತೆ ಈ ಕೃತ್ಯ

    ಹಟ್ಟಿಕೇರಿ ಟೋಲ್​ ಬಳಿ ಶುಲ್ಕದ ವಿಚಾರವಾಗಿ ಅಂಕೋಲಾದ ಸುರೇಶ ನಾಯಕ, ಬೊಮ್ಮಯ್ಯ ಸಣ್ಣಪ್ಪ ನಾಯಕ, ಗೋಪಾಲ ಗಿರಿಯಣ್ಣ ನಾಯಕ, ಸುರೇಶ ಗಿರಿಯಣ್ಣ ನಾಯಕ ಟೋಲ್ ಸಿಬ್ಬಂದಿ ಜತೆ ವಾಗ್ವಾದ ನಡೆಸುತ್ತಿದ್ದರು. ಕಾರವಾರದಿಂದ ಅಂಕೋಲಾ ಕಡೆ ತೆರಳುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಟೋಲ್​ ಸಿಬ್ಬಂದಿ ಜತೆಗಿನ ಗಲಾಟೆ ನಿಲ್ಲಿಸುವಂತೆ ಸೂಚಿಸಿದ್ದರು.

    ಕರ್ತವ್ಯನಿರತ ಪೊಲೀಸ್​ ಅಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನ! ವಿಡಿಯೋ ವೈರಲ್​
    ಸುರೇಶ ನಾಯಕ

    ಆದರೆ, ಅವರ ವಿರುದ್ಧವೇ ಹರಿಹಾಯ್ದ  ಸುರೇಶ ನಾಯಕ ತನ್ನ ಸ್ಕಾರ್ಫಿಯೋ ಕಾರನ್ನು ಎಎಸ್​ಪಿ ಮೇಲೆ ಹರಿಸಲು ಯತ್ನಿಸಿದ್ದಾರೆ. ಕಾರು ಎಎಸ್​ಪಿಗೆ ಡಿಕ್ಕಿಯಾಗಿದ್ದು, ಅವರು ನೆಲದ ಮೇಲೆ ಬಿದ್ದು ‌ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕಾರಿನ್ನು ನಿಲ್ಲಿಸುವಂತೆ ಮುಂದೆ ನಿಂತು ತಡೆಯಾಕಿದ್ದರಾದರೂ ಅವರನ್ನು ಗುದ್ದಿಕೊಂಡು ಹೋಗುವಂತೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದರು.

    ಈ ಸಂಬಂಧ ಸುರೇಶ್​ ನಾಯಕ್​ನನ್ನು ಬಂಧಿಸಿದ್ದು, ಬೊಮ್ಮಯ್ಯ ನಾಯಕ, ಗೋಪಾಲ ನಾಯಕ ಮತ್ತು ಸುರೇಶ್​ ನಾಯಕನ ಅಪ್ರಾಪ್ತ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

    ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts