ಉತ್ತರಕನ್ನಡ: ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ವಾಹನ ಹರಿಸಲು ಯತ್ನಿಸಿದ ಘಟನೆ ಸೋಮವಾರ ನಡೆದಿದ್ದು, ಈ ಸಂಬಂಧ ನಾಲ್ವರನ್ನು ಪೊಲಿಸರು ಬಂಧಿಸಿದ್ದಾರೆ.
ಅಂಕೋಲಾದ ಹಟ್ಟಿಕೇರಿ ಟೋಲ್ನಲ್ಲಿ ಎಎಸ್ಪಿ ಮೇಲೆ ಕಾರು ಹರಿಸಲು ಯತ್ನಿಸಿದ ಕಾಂಗ್ರೆಸ್ ಮುಖಂಡನೂ ಆದ ಉದ್ಯಮಿ ಸುರೇಶ ನಾಯಕ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ಪ್ರಿಯತಮೆಯ ಓಲೈಕೆಗಾಗಿ ಆಕೆಯ ಮಗುವನ್ನೇ ಕೊಂದು ಮೂಟೆಕಟ್ಟಿ ಎಸೆದ ಪ್ರಿಯಕರ! ಬೆಚ್ಚಿಬೀಳಿಸುತ್ತೆ ಈ ಕೃತ್ಯ
ಹಟ್ಟಿಕೇರಿ ಟೋಲ್ ಬಳಿ ಶುಲ್ಕದ ವಿಚಾರವಾಗಿ ಅಂಕೋಲಾದ ಸುರೇಶ ನಾಯಕ, ಬೊಮ್ಮಯ್ಯ ಸಣ್ಣಪ್ಪ ನಾಯಕ, ಗೋಪಾಲ ಗಿರಿಯಣ್ಣ ನಾಯಕ, ಸುರೇಶ ಗಿರಿಯಣ್ಣ ನಾಯಕ ಟೋಲ್ ಸಿಬ್ಬಂದಿ ಜತೆ ವಾಗ್ವಾದ ನಡೆಸುತ್ತಿದ್ದರು. ಕಾರವಾರದಿಂದ ಅಂಕೋಲಾ ಕಡೆ ತೆರಳುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಟೋಲ್ ಸಿಬ್ಬಂದಿ ಜತೆಗಿನ ಗಲಾಟೆ ನಿಲ್ಲಿಸುವಂತೆ ಸೂಚಿಸಿದ್ದರು.
ಆದರೆ, ಅವರ ವಿರುದ್ಧವೇ ಹರಿಹಾಯ್ದ ಸುರೇಶ ನಾಯಕ ತನ್ನ ಸ್ಕಾರ್ಫಿಯೋ ಕಾರನ್ನು ಎಎಸ್ಪಿ ಮೇಲೆ ಹರಿಸಲು ಯತ್ನಿಸಿದ್ದಾರೆ. ಕಾರು ಎಎಸ್ಪಿಗೆ ಡಿಕ್ಕಿಯಾಗಿದ್ದು, ಅವರು ನೆಲದ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕಾರಿನ್ನು ನಿಲ್ಲಿಸುವಂತೆ ಮುಂದೆ ನಿಂತು ತಡೆಯಾಕಿದ್ದರಾದರೂ ಅವರನ್ನು ಗುದ್ದಿಕೊಂಡು ಹೋಗುವಂತೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದರು.
ಈ ಸಂಬಂಧ ಸುರೇಶ್ ನಾಯಕ್ನನ್ನು ಬಂಧಿಸಿದ್ದು, ಬೊಮ್ಮಯ್ಯ ನಾಯಕ, ಗೋಪಾಲ ನಾಯಕ ಮತ್ತು ಸುರೇಶ್ ನಾಯಕನ ಅಪ್ರಾಪ್ತ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.
ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ