ನವದೆಹಲಿ: ದೇಶದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು ಸೋಂಕಿನ ನಿಯಂತ್ರಣಕ್ಕೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವೆಂಟಿಲೇಟರ್ಗಳ ಸಮಸ್ಯೆ ಉಂಟಾಗಬಹುದು ಎಂದು ಪರಿಣತರು ಹೇಳಿದ್ದು ಈ ಕುರಿತಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.
ಗೌರವಯುತ ಪ್ರಧಾನಿಯವರೇ, ದೇಶದಲ್ಲಿ ವೆಂಟಿಲೇಟರ್ಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು ಎಂದು ಗೊತ್ತಿದ್ದ ಮೇಲೂ ಕೇಂದ್ರ ಸರ್ಕಾರ ಮಾರ್ಚ್ 19ರವರೆಗೆ ವೆಂಟಿಲೇಟರ್ ಮತ್ತು ಮಾಸ್ಕ್ಗಳನ್ನು ರಫ್ತು ಮಾಡುವುದಕ್ಕೆ ಅವಕಾಶವನ್ನೇಕೆ ನೀಡಿತು. ಇದು ಯಾರು ಮಾಡಿರುವ ಅವ್ಯವಸ್ಥೆ. ಇದರ ಹಿಂದೆ ಕ್ರಿಮಿನಲ್ ಪಿತೂರಿ ಇದೆಯಲ್ಲವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಒಂದು ವೇಳೆ ಕರೊನಾ ವೈರಸ್ ಸಮಸ್ಯೆ ಕಡಿಮೆಯಾಗದೆ ಹೆಚ್ಚಾದರೆ, ದೇಶದಲ್ಲಿರುವ 40,000 ವೆಂಟಿಲೇಟರ್ಗಳು ಸಾಲದಾಗುತ್ತದೆ ಎಂದು ಪರಿಣತರು ತಿಳಿಸಿದ್ದಾರೆ. ಕರೊನಾ ವೈರಸ್ ಸೋಂಕಿತರಲ್ಲಿ ಶೇ.5 ಜನರಿಗೆ ಉಸಿರಾಟದ ತೊಂದರೆ ಹೆಚ್ಚಾಗುವ ಕಾರಣ ಅವರನ್ನು ವೆಂಟಿಲೇಟರ್ ಮೂಲಕ ಉಸಿರಾಡುವಂತೆ ಮಾಡುವ ಅವಶ್ಯಕತೆ ಇದೆ.
ಮಾರ್ಚ್ 19ರ ನಂತರ ದೇಶದಲ್ಲಿ ವೆಂಟಿಲೇಟರ್ಗಳ ರಫ್ತನ್ನು ನಿಷೇಧಿಸಲಾಗಿದೆ. ಕರೊನಾ ಸೋಂಕಿತರಿಗೆ ಐಸಿಯು ವ್ಯವಸ್ಥೆ ಮಾಡುವ ಸಲುವಾಗಿ ಕೆಲವು ಶಸ್ತ್ರಚಿಕಿತ್ಸೆಗಳನ್ನೂ ಸಹ ಮುಂದೂಡಲಾಗಿದೆ. ದೇಶದಾದ್ಯಂತ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಕೆಲ ರಾಜ್ಯಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. (ಏಜೆನ್ಸೀಸ್)
आदरणीय प्रधानमंत्री जी,
WHO की सलाह
1. वेंटिलेटर
2. सर्जिकल मास्क
का पर्याप्त स्टाक रखने के विपरीत भारत सरकार ने 19 मार्च तक इन सभी चीजों के निर्यात की अनुमति क्यों दीं?ये खिलवाड़ किन ताक़तों की शह पर हुआ? क्या यह आपराधिक साजिश नहीं है?#Coronavirus https://t.co/tNgkngZ936
— Rahul Gandhi (@RahulGandhi) March 23, 2020
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್?