More

    ಸಂಸದ ಅಂಗಡಿಯವರ ಅಗಲಿಕೆಗೆ ಜಗದ್ಗುರುಗಳ ಸಂತಾಪ

    ಬೆಂಗಳೂರು: ಸಂಸದ ಸುರೇಶ್​ ಅಂಗಡಿಯವರ ಅಗಲಿಕೆಗೆ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. “ಸುರೇಶ್ ಅಂಗಡಿ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ, ಅವರು ಶ್ರೀಶೈಲಕ್ಕೆ ರೈಲ್ವೇ ಯೋಜನೆ ತರಲು ಅಪಾರ ಶ್ರಮ ವಹಿಸಿದ್ದರು. ಅವರ ಅಗಲಿಕೆಯಿಂದ ರಾಜ್ಯ ರಾಜಕಾರಣಕ್ಕೂ ನಷ್ಟವಾಗಿದೆ” ಎಂದು ಶ್ರೀಶೈಲದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಸಂತಾಪ ಸೂಚಿಸಿದ್ದಾರೆ.

    “ಸುರೇಶ ಅಂಗಡಿ ಅವರು ವೀರಶೈವ ಸಮಾಜದ ದೊಡ್ಡ ನಾಯಕರಾಗಿದ್ದರು. ಪಂಚಪೀಠಗಳ ಪರಮ ಭಕ್ತರಾಗಿದ್ದ ಅವರು ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ಅವರು ಕಾಶಿ ಪೀಠಕ್ಕೆ ಪ್ರಧಾನಿ ಮೋದಿಯವರನ್ನು ಕರೆ ತಂದಿದ್ದರು. ಅಂಗಡಿಯವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ” ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಂತಾಪ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts