More

    ವಿಧಾನಸಭಾ ಕಲಾಪ ವೀಕ್ಷಣೆಗೆ ಆಗಮಿಸಿ

    ರಿಪ್ಪನ್‌ಪೇಟೆ: ಪಟ್ಟಣಕ್ಕೆ ಆಗಮಿಸಿದ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರಿಗೆ ವಿನಾಯಕ ವೃತ್ತದಲ್ಲಿ ಶನಿವಾರ ರಾತ್ರಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ನೇತೃತ್ವದಲ್ಲಿ ಸಾರ್ವಜನಿಕರು ಆತ್ಮೀಯ ಸ್ವಾಗತ ಕೋರಿದರು.
    ಖಾಸಗಿ ಕಾರ್ಯಕ್ರಮದ ಅಂಗವಾಗಿ ಸಾಗರಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ನಾಗರಿಕರೊಂದಿಗೆ ಸರಳ ಸಜ್ಜನಿಕೆಯಿಂದ ಮಾತನಾಡಿದ ಖಾದರ್, ವಿಧಾನಸಭೆ ಕಲಾಪ ವೀಕ್ಷಣೆಗೆ ಆಗಮಿಸಿ ಕಲಾಪದ ಗೌರವ ಘನತೆಯನ್ನು ಎತ್ತಿಹಿಡಿಯಬೇಕು ಎಂದರು.
    ಭೇಟಿಯ ಸವಿನೆನಪಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮಲೆನಾಡಿನ ಗುಣಮಟ್ಟದ ಅಪ್ಪೆ ಮಾವಿನಮಿಡಿಯ ಉಪ್ಪಿನಕಾಯಿಯನ್ನು ಉಡುಗೊರೆಯಾಗಿ ನೀಡಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಮುಖಂಡರಾದ ಅಮೀರ್ ಹಂಜಾ, ಈಶ್ವರಪ್ಪ ಗೌಡ, ಆಸೀಫ್, ಗಣಪತಿ, ಫ್ಯಾನ್ಸಿ ರಮೇಶ್, ಖಾಸಿಂ ಸಾಬ್, ಹಸನಬ್ಬ, ಹಾಲುಗುಡ್ಡೆ ಹರೀಶ್, ನಾಗಪ್ಪ ಅರಸಾಳು, ಫಾಜಿಲ್ ಬ್ಯಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts