ಬೆಂಗಳೂರು: ಹೆಚ್ಚುತ್ತಿರುವ ಕರೊನಾ ಸೋಂಕು ನಿಯಂತ್ರಣಕ್ಕೆ ವಿಶೇಷ ಕಾರ್ಯ ಯೋಜನೆ, ಇನ್ನಷ್ಟು ಕ್ರಮಗಳ ಜಾರಿ ಉದ್ದೇಶದಿಂದ ಸರ್ಕಾರ ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಬೆಂಗಳೂರು ಜನಪ್ರತಿನಿಧಿಗಳ ಸಭೆ ಕರೆದಿದೆ.
ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುಯಲ್ ರೂಪದಲ್ಲಿ ಭಾಗವಹಿಸುವರು. ಸದ್ಯ ಯಡಿಯೂರಪ್ಪ ಅವರು ಕರೊನಾ ಸೋಂಕಿತರಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಎಂ ನಿರ್ದೇಶನದಂತೆ ವಿಪತ್ತು ನಿರ್ವಹಣಾ ಕೋಶದ ಉಪಾಧಕ್ಷ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು. ಆದರೆ ತಾವು ಸಹ ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಸಿಎಂ ಹೇಳಿದ್ದರ ಮೇಲೆ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿರಿ: ನಾನಿಲ್ಲಿಯೇ ನನ್ನ ಗಂಡನಿಗೆ ಕಿಸ್ ಮಾಡ್ತೇನೆ, ತಾಕತ್ತಿದ್ರೆ ತಡೆಯಿರಿ! ಪೊಲೀಸರಿಗೆ ಮಹಿಳೆ ಸವಾಲು
ಬೆಂಗಳೂರು ಮಹಾನಗರ ವ್ಯಾಪ್ತಿಯ ಸಚಿವರು, ಸಂಸದ-ಶಾಸಕರು ಪಾಲ್ಗೊಳ್ಳಲಿದ್ದು, ತಜ್ಞರ ವರದಿ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯಗಳ ಕುರಿತು ಚರ್ಚಿಸುವರು.
ವೈಜ್ಞಾನಿಕ ನೆಲೆಗಟ್ಟನಲ್ಲಿ ಬಿಗಿ ಕ್ರಮಗಳ ಮೂಲಕ ರಾಜಧಾನಿಯಲ್ಲಿ ಕರೊನಾ ಸೋಂಕು ಕಟ್ಟಿ ಹಾಕುವುದಕ್ಕೆ ಮಾರ್ಗೋಪಾಯ, ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ.
VIDEO| ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಡೈನೋಸಾರ್ ರೀತಿಯ ಜೀವಿ: ಬೆಚ್ಚಿಬೀಳಿಸೋ ವಿಡಿಯೋ ಇದು!
ಮುತ್ತೋಡಿ ಕಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಾಟ