ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಒರಾಯನ್ ಮಾಲ್ ಪಿವಿಆರ್ ಚಿತ್ರಮಂದಿರದಲ್ಲಿ 777 ಚಾರ್ಲಿ ಕನ್ನಡ ಚಲನಚಿತ್ರವನ್ನು ವೀಕ್ಷಣೆ ಮಾಡಿದರು.
ಕಿರಣ್ ರಾಜ್ ನಿರ್ದೇಶನ, ರಕ್ಷಿತ್ ಶೆಟ್ಟಿ ಅಭಿನಯ ಹಾಗೂ ನಿರ್ಮಾಣದ ‘777 ಚಾರ್ಲಿ’ ಚಿತ್ರ ದೇಶದಾದ್ಯಂತ ತೆರೆಕಂಡು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವುದಷ್ಟೇ ಅಲ್ಲದೆ, ಅತ್ಯುತ್ತಮ ಪ್ರಕ್ರಿಯೆಯನ್ನು ಪಡೆದು ಮೆಚ್ಚುಗೆಗೂ ಪಾತ್ರವಾಗುತ್ತಿದೆ.
ನಾಯಿಯೊಂದರ ಜತೆಗೆ ಕಥಾನಾಯಕನ ಒಡನಾಟದ ಕಥೆ ಹೊಂದಿರುವ, ಚಿತ್ರದುದ್ದಕ್ಕೂ ಚಾರ್ಲಿ ಹೆಸರಿನ ನಾಯಿಯ ಪಾತ್ರವೂ ಇದ್ದು, ಈ ಸಿನಿಮಾ ಈಗಾಗಲೇ ಶ್ವಾನಪ್ರಿಯರು ಮಾತ್ರವಲ್ಲದೆ, ಸಿನಿಪ್ರಿಯರ ಶ್ಲಾಘನೆಗೆ ಒಳಗಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಒರಾಯನ್ ಮಾಲ್ ಪಿವಿಆರ್ ಚಿತ್ರಮಂದಿರದಲ್ಲಿ 777 ಚಾರ್ಲಿ ಕನ್ನಡ ಚಲನಚಿತ್ರವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ್, ಬಿ ಸಿ ನಾಗೇಶ, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಮತ್ತು ಚಿತ್ರದ ನಿರ್ದೇಶಕ ನಾಯಕ ನಟಿ ಮತ್ತು ಇತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಿಂದ ಹಣದ ಹೊಳೆ: ಸಾಕ್ಷಿ ಸಹಿತ ಸಿಕ್ಕಿಬಿದ್ದಿದ್ದು, ಕ್ರಮ ಕೈಗೊಳ್ಳಿ ಎಂದ ಬಿಜೆಪಿ ಶಾಸಕ