More

    ಪ್ರಾರ್ಥನಾಲಯದ ಮೇಲೆ ದಾಳಿ

    ಬೆಳಗಾವಿ: ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿರುವ ‘ಯೇಸುವೆ ಆಧಾರ ಪ್ರಾರ್ಥನಾಲಯ’ದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಕಟ್ಟಡದ ಗೋಡೆ ಹಾಗೂ ಕಿಟಕಿಗಳ ಗಾಜು ಹಾನಿಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಏ. 22ರಂದು 10-15 ಜನರ ಗುಂಪೊಂದು ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಅಲ್ಲದೆ, ಕಟ್ಟಡದ ಒಳಗಿದ್ದ ಕಟ್ಟಿಗೆಗಳನ್ನು ಸುಟ್ಟುಹಾಕಿ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಇದಕ್ಕೂ ಮುನ್ನ ವೈರ್‌ಗಳನ್ನು ಹರಿದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಗ್ರಾಮದ ಕೆಲವರು ಈ ಕಟ್ಟಡ ನಿರ್ಮಾಣಕ್ಕೆ ವಿರೋಧಿಸಿ ಪದೇಪದೆ ಕಟ್ಟಡದ ಮೇಲೆ ದಾಳಿ ನಡೆಸುತ್ತಿದ್ದಾರೆ.

    2019ರ ಡಿಸೆಂಬರ್ 23ರಂದೂ ದಾಳಿ ನಡೆದಿತ್ತು. ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ, ತನಿಖೆ ಎಲ್ಲಿವರೆಗೆ ಬಂದಿದೆ ಎನ್ನುವುದು ತಿಳಿದಿಲ್ಲ ಎಂದು ಾದರ್ ನಾರಾಯಣ ಚಿನ್ನಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ಸಿಪಿಐ ಎಸ್. ಎಸ್. ಕೌಜಲಗಿ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts