ಗೋವಿಂದ ನಾಮಾವಳಿಯಲ್ಲಿ ಏಕಾದಶಿ ಕಳೆ

blank

ಚಿತ್ರದುರ್ಗ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸೋಮವಾರ ನಗರದ ವೆಂಕಟೇಶ್ವರ ಸ್ವಾಮಿ ದೇಗುಲಗಳು ಕಳೆಗಟ್ಟಿದ್ದವು. ಆಕರ್ಷಕ ಕಮಾನು, ವಿದ್ಯುತ್ ದೀಪಾಲಂಕಾರ, ಶಾಮಿಯಾನ ವ್ಯವಸ್ಥೆಗಳೊಂದಿಗೆ ಕಂಗೊಳಿಸಿದ ದೇವಾಲಯಗಳು ಭಕ್ತರನ್ನು ಸೆಳೆದವು.

ಸ್ವರ್ಗದ ಬಾಗಿಲು ತೆರೆದುಕೊಳ್ಳುವ ಪುಣ್ಯದಿನ ಎಂಬ ನಂಬಿಕೆಯಿಂದ ದೇವಸ್ಥಾನಗಳಲ್ಲಿ ವೈಕುಂಠ ದ್ವಾರ ಏರ್ಪಾಡು ಮಾಡಲಾಗಿತ್ತು. ಸರದಿ ಸಾಲಿನಲ್ಲಿ ನಿಂತ ಅಪಾರ ಸಂಖ್ಯೆಯ ಭಕ್ತರು ತಿರುಮಲನ ದರ್ಶನ ಪಡೆದರು. ಗೋವಿಂದ.. ಗೋವಿಂದ.. ನಾಮಾವಳಿಯೊಂದಿಗೆ ಭಕ್ತಿ ಸಲ್ಲಿಸಿದರು.

ನಸುಕಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ಅಭಿಷೇಕ, ಮಹಾಸಂಕಲ್ಪ, ವಿಷ್ಣು ಸಹಸ್ರಮಾನ, ಆಂಡಾಳ್ ತಿರುಪಾವೈ ಪಾರಾಯಣ, ಅಷ್ಟೋತ್ತರ, ಮಹಾಪ್ರಸಾದ, ಬಲಿ ಪ್ರದಾನ, ಮಹಾ ಮಹಾಮಂಗಳಾರತಿ ಬಳಿಕ ವೈಕುಂಠ ಬಾಗಿಲು ತೆರೆಯಲಾಯಿತು. ಬೆಳಗ್ಗೆ 6ರಿಂದ ರಾತ್ರಿ 10, 11ರ ವರೆಗೆ ದೇವಾಲಯಗಳಲ್ಲಿ ಭಕ್ತರಿಗೆ ಅಖಂಡ ದರ್ಶನಾವಕಾಶ ಕಲ್ಪಿಸಲಾಗಿತ್ತು.

ದೇಗುಲಗಳಲ್ಲಿ ವೆಂಕಟೇಶ್ವರ ಸ್ವಾಮಿ-ಪದ್ಮಾವತಿ ದೇವಿಯನ್ನು ಹೂ, ತುಳಸಿ ಮಾಲೆಗಳಿಂದ ಅಲಂಕರಿಸಲಾಗಿತ್ತು. ಕೆಲವೆಡೆ ಹೊರಭಾಗದಲ್ಲಿ ದೇವರ ಮೂರ್ತಿಗಳ ಅಚ್ಚುಗಳ ಆಕರ್ಷಕವಾಗಿತ್ತು. ಸರದಿ ಸಾಲಿನಲ್ಲಿ ಬರಲು ದೇವಾಲಯ ಪ್ರವೇಶಕ್ಕೆ ಬ್ಯಾರಿಕೇಡ್‌ಗಳ ವ್ಯವಸ್ಥೆ ಇತ್ತು. ಧ್ವನಿಸುರುಳಿಯಲ್ಲಿ ಭಕ್ತಿಗೀತೆ, ಸಹಸ್ರ ನಾಮಾವಳಿ ಮೊಳಗಿದವು.

ಅಲ್ಲಲ್ಲಿ ಕೇಸರಿಬಾತ್, ಬಾದಾಮಿ ಹಾಲು ಮೊದಲಾದ ಪ್ರಸಾದವಿತ್ತು. ದೇಗುಲದ ಹೊರಗೆ ಹೂವು-ಹಣ್ಣು, ಕೃಷ್ಣನ ಪುಸ್ತಕಗಳು ಇತರೆ ವಸ್ತುಗಳ ಮಾರಾಟ ನಡೆಯಿತು.

ಮಾರುತಿ ನಗರದಲ್ಲಿ ಬಲಮುರಿ ಗಣಪತಿ ಶ್ರೀ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಯಿತು. ಗೋನೂರು ರಸ್ತೆಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ದೇವರ ದರ್ಶನಕ್ಕೆ ಕಾದು ನಿಂತಿದ್ದ ಭಕ್ತರ ಸಾಲು ದೊಡ್ಡದಿತ್ತು.
ಇದೇ ರೀತಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Share This Article

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…