ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸೇವಾದಳದ ಸಂಸ್ಥಾಪಕ ಎನ್.ಎಸ್.ಹರ್ಡೆಕರ್ ಅವರ 132ನೇ ಜಯಂತಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ, ಹರ್ಡೆಕರ್ ಅವರು ದೇಶಕ್ಕಾಗಿ ಜೀವನ ಮುಡಿಪಿಟ್ಟಿದ್ದರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಪ್ರತಿ ವ್ಯಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡರಾದ ಇಂದಿರಾ, ಡಿ.ಎನ್.ಮೈಲಾರಪ್ಪ, ಅಣ್ಣಪ್ಪ, ಮರುಳಾರಾಧ್ಯ, ವಸೀಂ, ಚಾಂದ್ಪೀರ್, ಸೈಯದ್ ಸೈಫುಲ್ಲಾ, ರಹಮತ್ವುಲ್ಲಾ, ಭೂತೇಶ್, ಮಹಮದ್ ಇತರರಿದ್ದರು.