More

    ಮಾಟ ಮಾಡಿಸಿದ್ದನೆಂಬ ಶಂಕೆಗೆ ಕೊಲೆ

    ಚಿತ್ರದುರ್ಗ: ಮಾಟ, ಮಂತ್ರ ಮಾಡಿಸಿ ತೊಂದರೆ ಕೊಡುತ್ತಿದ್ದಾನೆಂಬ ಶಂಕೆಯಿಂದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆತನನ್ನು ಕೊಲೆ ಮಾಡಿದ ಆರೋಪದಡಿ ಪಗಡಲಬಂಡೆ ಗ್ರಾಮದ ಮಂಜುನಾಥ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

    ಚಳ್ಳಕೆರೆ ತಾಲೂಕು ಹರವಿಗೊಂಡನಹಳ್ಳಿ ಜಮೀನೊಂದರಲ್ಲಿ ಇದ್ದಿಲು ಸುಡುವ ಕೆಲಸ ಮಾಡುತ್ತಿದ್ದ ಚಂದ್ರಣ್ಣ ಎಂಬಾತನನ್ನು ಡಿ.4ರ ರಾತ್ರಿ ಕೊಲೆ ಮಾಡಲಾಗಿತ್ತು.

    ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಂದ್ರಣ್ಣ ಮತ್ತು ಆತನ ನಡುವಿನ ಹತ್ತಾರು ವರ್ಷಗಳ ವೈಷಮ್ಯ ಬಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದರು.

    ಈ ಕುರಿತಂತೆ ಇವರಿಬ್ಬರ ನಡುವೆ ಅನೇಕ ಬಾರಿ ಜಗಳವೂ ಆಗಿತ್ತು. ನನ್ನ ಪ್ರಗತಿ ಸಹಿಸದೆ ನಮ್ಮಗಳ ವಿರುದ್ಧ ಮಾಟ ಮಂತ್ರಗಳನ್ನು ಮಾಡಿಸುವುದನ್ನು ಮುಂದುವರಿಸಿದ್ದಾನೆಂಬ ಶಂಕೆಯಿಂದ ಅವನನ್ನು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.

    ಪ್ರಕರಣದ ತನಿಖೆಗೆ ಡಿವೈಎಸ್ಪಿ ಎಸ್.ರೋಷನ್ ಜಮೀರ್, ಸಿಪಿಐ ಆನಂದ, ಪಿಎಸ್‌ಐ ಡಿ.ಶಿವಕುಮಾರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts