ಬೆಂಗಳೂರು: ನಟ ಚಿರಂಜೀವಿ ಸರ್ಜಾರಿಗೆ ಮೊದಲೇ ಸಾವಿನ ಸುಳಿವಿತ್ತಾ? ಹೀಗೊಂದು ಪ್ರಶ್ನೆಗೆ ಕಾರಣವಾಗಿದ್ದು, ಚಿರು ತಮ್ಮ ಆಪ್ತ ವಯಲದಲ್ಲಿ ನಡೆಸಿದ ವಾಟ್ಸ್ಆ್ಯಪ್ ಸಂಭಾಷಣೆಯೊಂದರ ಸ್ಕ್ರೀನ್ ಶಾಟ್.
ಹಾಯ್ ಫ್ರೆಂಡ್ಸ್ ನಿಮಗೊಂದು ಗೊತ್ತಾ… ನಾನು ನಿಮ್ಮನ್ನು ಪ್ರೀತಿಸುತ್ತೇನೆ ಫ್ರೆಂಡ್ಸ್…. ನಾವು ಒಂದು ವಾರ ಎಲ್ಲಾದರೂ ಪ್ರವಾಸ ಹೋಗೋಣ..ನಾವು ಕಳೆದುಕೊಂಡಿದ್ದನ್ನು ಮತ್ತೆ ಪಡೆಯೋಣ… ನನ್ನನ್ನು ನಂಬಿ ನಿಮ್ಮಗಳ ಜತೆಯಲ್ಲಿರುವುದಕ್ಕಿಂತ ಅತ್ಯಮೂಲ್ಯವಾದದ್ದು ಬೇರೇನಿಲ್ಲ ಎಂದಿದ್ದಾರೆ. ಕೊನೆಯದಾಗಿ “ನಮ್ಮಲ್ಲಿ ಏನಿದೆ ಎಂಬುದು ನಮಗೇ ತಿಳಿದಿಲ್ಲ” ಎನ್ನುವ ಚಿರು ಮಾತು ಎಂತವರನ್ನೂ ಭಾವುಕರನ್ನಾಗಿಸದೇ ಇರದು. ಇದನ್ನೂ ಓದಿ: ಚಿರು ಸರ್ಜಾ ಆ್ಯಂಡ್ ಗ್ಯಾಂಗ್; ಇವು ಬಾಲ್ಯದ ಹಸಿ ಹಸಿ ನೆನಪುಗಳು..
ಲಾಕ್ಡೌನ್ ನಡುವೆ ನಡೆದಿರುವ ಸಂಭಾಷಣೆ ಇದಾಗಿದ್ದು, ಲಾಕ್ಡೌನ್ಮುಗಿಯುತ್ತಿದ್ದಂತೆಯೇ ಸ್ನೇಹಿತರೊಟ್ಟಿಗೆ ಪ್ರವಾಸ ಮಾಡಬೇಕೆಂಬುದು ಚಿರು ಬಯಕೆಯಾಗಿತ್ತು. ಆದರೆ, ಅವರ ಬಯಕೆ ಕೊನೆಗೂ ಈಡೇರಲೇ ಇಲ್ಲ. ಅಷ್ಟರಲ್ಲಾಗಲೇ ಚಿರು ಬದುಕಿನಲ್ಲಿ ಕ್ರೂರ ವಿಧಿ ತನ್ನ ಅಟ್ಟಹಾಸವನ್ನು ಮೆರೆದೇ ಬಿಟ್ಟಿತು. ವಾಟ್ಸ್ ಆ್ಯಪ್ ಸಂಭಾಷಣೆಯನ್ನು ಚಿರು ಗೆಳೆಯ ಹಾಗೂ ನಟ ಪ್ರಜ್ವಲ್ ದೇವರಾಜ್ ಹಂಚಿಕೊಂಡಿದ್ದಾರೆ.