More

    ಮಕ್ಕಳ ವೆಂಟಿಲೇಟರ್ ಆಂಬುಲೆನ್ಸ್ ಇಲ್ಲದೇ ಮಗು ಸಾವು- ಶವದೊಂದಿಗೆ ಪಾಲಕರ ಪ್ರತಿಭಟನೆ

    ಕಾರವಾರ: ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವೊಂದು ಗುರುವಾರ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ನ ಆಸ್ಪತ್ರೆಯಲ್ಲಿ ನಲ್ಲಿ ಮೃತಪಟ್ಟಿದೆ.
    ಮಕ್ಕಳ ವೆಂಟಿಲೇಟರ್ ಆಂಬುಲೆನ್ಸ್ ಇಲ್ಲದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿದ ಪಾಲಕರು ಶವದ ಜತೆ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.
    ಕಿನ್ನರ ಮೂಲದ ರಾಜೇಶ ನಾಗೇಕರ್ ಅವರ ಮೂರು ತಿಂಗಳ ಗಂಡು ಮಗು ರಾಜನ್ ನಾಗೇಕರ್ ಗೆ ಕಫ ತುಂಬಿತ್ತು.
    ಮೂರು ದಿನಗಳಿಂದ ಇಲ್ಲಿನ ಮೆಡಿಕಲ್ ಕಾಲೇಜ್ ನ ಮಕ್ಕಳ ವಿಶೇಷ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
    ಆದರೆ, ಬುಧವಾರ ಮಗುವಿನ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯಲು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಶಿಫಾರಸು ಮಾಡಿದ್ದರು.

    ಇದನ್ನೂ ಓದಿ:14 ವರರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿ? ಗೊಂದಲದಲ್ಲಿದ್ದೇನೆ ಸಹಾಯ ಮಾಡಿ ಎಂದ ಯುವತಿ


    ಆದರೆ, ಸರ್ಕಾರಿ ಮೆಡಿಕಲ್‌ ಕಾಲೇಜ್ ನಲ್ಲಿ ಮಕ್ಕಳ ವಿಶೇಷ ಆಂಬುಲೆನ್ಸ್ ಸೌಕರ್ಯ ಇಲ್ಲದ ಕಾರಣ ಉಡುಪಿಯಿಂದ ಆಂಬುಲೆನ್ಸ್ ತರಿಸಲಾಯಿತು. ಅಲ್ಲಿಗೆ ಸಾಕಷ್ಟು ಸಮಯ ಕಳೆದಿದ್ದು, ಮಗು ಗುರುವಾರ ಬೆಳಗ್ಗೆ 8 ಗಂಟೆಗೆ ಮೃತಪಟ್ಟಿದೆ.
    ಆಸ್ಪತ್ರೆಯಲ್ಲಿ ಮಕ್ಕಳ‌ ಆಂಬುಲೆನ್ಸ್ ಸೌಲಭ್ಯ ಇಲ್ಲದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಪಾಲಕರು ಆಕ್ಷೇಪಿಸಿದರು. ಜಿಲ್ಲಾ‌ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ಹಾಗೂ ಇತರರು ಪ್ರತಿಭಟನೆಗೆ ಜತೆಯಾದರು.

    ಐದು ವರ್ಷದ ನಂತರ ಮಗು
    ರಾಜೇಶ 5 ವರ್ಷದ ಹಿಂದೆ ಮದುವೆಯಾಗಿದ್ದರು. ದೇವರಿಗೆ ಹರಕೆ ಹೊತ್ತ ನಂತರ ನಾಲ್ಕು ವರ್ಷದ ನಂತರ ಮಗು ಹುಟ್ಟಿತ್ತು. ಈಗ ಅದೂ ಮೃತಪಟ್ಟಿರುವುದು ದಂಪತಿಗಳ ತೀವ್ರ ದುಖಕ್ಕೆ ಕಾರಣವಾಗಿದೆ.

    ಕಳೆದ ಆರು ತಿಂಗಳ ಹಿಂದೆ ಕ್ರಿಮ್ಸ್ ನಲ್ಲಿ ಮಕ್ಕಳ‌ ವಿಶೇಷ ತುರ್ತು ನಿಗಾ ಘಟಕ ಪ್ರಾರಂಭಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಮಕ್ಕಳ ಜೀವ ಉಳಿಸಲಾಗಿದೆ. ಈ ಮಗುವಿಗೂ ಚಿಕಿತ್ಸೆ ನೀಡಿದರೂ ನಮ್ಮ ಕೈ ಮೀರಿತು‌. ನಮ್ಮಲ್ಲಿ ಮಕ್ಕಳ ವೆಂಟಿಲೇಟರ್ ಇರುವ ಆಂಬುಲೆನ್ಸ್ ಇಲ್ಲ. ಅದಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.
    ಡಾ.ರಾಜಕುಮಾರ ಮರೋಳ
    ಕ್ರಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts